ದಿನದ ಅಪರಾಧಗಳ ಪಕ್ಷಿನೋಟ ೩೧ ನೇ ಡಿಸೆಂಬರ್ ೦೭

December 31, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ --೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಕೋಲಾರ ಕೋಲಾರ ನಗರ ಕ್ಲಾಕ್ ಟವರ್ ವೃತ್ತದ ಬಳಿ ಸುಮಾರು ೪೦-೪೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಸಮಯದಲ್ಲಿ ಪಲ್ಲಿವಿ ವೃತ್ತದ ಕಡೆಯಿಂದ ಬಂದ ಟೆಂಪೋ ಸಂಖ್ಯೆ ಕೆಎ-೦೧--೧೧೫೧ ಚಾಲಕ ಸುರೇಶ ಎಂಬುವರು ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಗಾಯಗಳಾಗಿದ್ದು ಸ್ಥಳದಲ್ಲೇ ಇದ್ದ ಸೈಯದ್ ಅಮಾನುಲ್ಲಾ ಎಂಬುವರು ಗಾಯಾಳುವನ್ನು ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ದೂರು ನೀಡಿದ ಮೇರೆಗೆ ಸಾಧಾರಣ ಸ್ವರೂಪದ ರಸ್ತೆ ಅಪಘಾತ ಪ್ರಕರಣ ದಾಖಲಾಗಿತ್ತು. ಗಾಯಾಳುವಿನ ಹೆಸರು ಕೃಷ್ಣಪ್ಪ (೪೫) ಬಾಗೇಪಲ್ಲಿ ವಾಸಿ ಎಂಬುದಾಗಿ ತಿಳಿದುಬಂದಿದ್ದು ಗಾಯಾಳು ಕೋಲಾರ ಎಸ್.ಎನ್.ಆರ್ ಆಸ್ಪತ್ರೆ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಗಳಲ್ಲಿ ಚಿಕಿತ್ಸೆಯನ್ನು ಪಡೆದಿದ್ದು ಚಿಕಿತ್ಸೆ ಫಲಕಾರಿಯಗದೇ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ ೩೦-೧೨-೨೦೦೭ ರಂದು ಮೃತಪಟ್ಟಿರುತ್ತಾರೆ.

-ಸಾಧಾರಣ: ೦೨

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೨-೨೦೦೭ ರಂದು ೨೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ತಿಮ್ಮಸಂದ್ರ ಗ್ರಾಮದ ವಾಸಿ ಟಿ.ಜಿ.ಬೈರೇಗೌಡ (೨೮) ಎಂಬುವರು ತಮ್ಮ ಮಾರುತಿ ೮೦೦ ಕಾರ್ ಸಂಖ್ಯೆ ಕೆಎ-೦೭-ಎಂ-೫೫೭೭ ವಾಹನದಲ್ಲಿ ಕೋಲಾರ ನಗರ ಬಂಗಾರಪೇಟೆ ವೃತ್ತದಿಂದ ಬೈಪಾಸ್ ಕಡೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಅದೇ ಮಾರ್ಗವಾಗಿ ಹಿಂಭಾಗದಿಂದ ಬಂದ ತವೇರಾ ಕಾರ್ ಸಂಖ್ಯೆ ಕೆಎ-೦೩-ಬಿ-೮೭೦೯ ವಾಹನದ ಚಾಲಕ ಜಾನ್ ಎಂಬುವರು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿರುತ್ತದೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೨-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಬಲ್ಲ ಗ್ರಾಮದ ವಾಸಿ ನಾಗಪ್ಪ ಎಂಬುವರು ಕೆಎ-೧೦-೬೮ ಸಂಖ್ಯೆಯ ಟ್ರಾಕ್ಟರ್ ನಲ್ಲಿ ಮರಳು ತುಂಬುವ ಸಲುವಾಗಿ ಸೀಗೇನಹಳ್ಳಿ ಕೆರೆ ಅಂಗಳಕ್ಕೆ ಹೋಗಿ ವಾಪಸ್ಸು ಅದೇ ಟ್ರಾಕ್ಟರ್ ನಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಸೀಗೇನಹಳ್ಳಿ ಕೆರೆ ತಿರುವಿನಲ್ಲಿ ಟ್ರಾಕ್ಟರ್ ನ ಚಾಲಕ ವೆಂಕಟರಮಣಪ್ಪ ಎಂಬುವರು ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಟ್ರಾಕ್ಟರ್ ನ ಟ್ರಾಲಿ ಮೇಲೆ ಕುಳಿತಿದ್ದ ನಾಗಪ್ಪ ರವರು ಕೆಳಗೆಬಿದ್ದಿರುತ್ತಾರೆ. ಕೆಳಗೆ ಬಿದ್ದ ನಾಗಪ್ಪ ರವರ ತೊಡೆ ಮೇಲೆ ಟ್ರಾಕ್ಟರ್ ಚಕ್ರ ಹರಿದ ಪರಿಣಾಮ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಬೆನ್ನಗೂರು ಗ್ರಾಮದ ವಾಸಿ ರಾಮಕ್ಕ (೫೩) ಎಂಬುವರು ಮೃತಪಟ್ಟವರು. ದಿನಾಂಕ ೩೦-೧೨-೨೦೦೭ ರಂದು ೧೧೩೦ ಗಂಟೆಗೆ ರಾಮಕ್ಕ ತನ್ನ ತೋಟದಲ್ಲಿ ಟೊಮೇಟೋ ಕಾಯಿಗಳನ್ನು ಕೀಳುತ್ತಿದ್ದರು. ಸಮಯದಲ್ಲಿ ಯಾವುದೋ ಒಂದು ವಿಷಪೂರಿನ ಹಾವು ಕಚ್ಚಿದ್ದರ ಪರಿಣಾಮ ಚಿಕಿತ್ಸೆಗಾಗಿ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲುಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ೧೪೫೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೊಟ ೩೦ ನೇ ಡಿಸೆಂಬರ್ ೦೭

December 31, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦--೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೨-೨೦೦೭ ರಂದು ೦೬೨೦ ಗಂಟೆ ಸಮಯದಲ್ಲಿ ಕೋಲಾರ ಮುನೇಶ್ವರ ನಗರದ ವಾಸಿ ಎನ್.ಸುಬ್ಬರಾವ್ (೫೫) ಎಂಬುವರು ತಮ್ಮ ಟಿ.ವಿ.ಎಸ್ ಸಂಖ್ಯೆ ಕೆಎ-೦೪-ಡಬ್ಲ್ಯೂ-೪೧೬೫ ದ್ವಿಚಕ್ರವಾಹನದಲ್ಲಿ ಕೋಲಾರದಿಂದ ಹೊರಟು ಶ್ರೀನಿವಾಸಪುರ ರಸ್ತೆಯ ಅಂಬೇಡ್ಕರ್ ಭವನದ ಮುಂಬಾಗ ಹೋಗುತ್ತಿದ್ದರು. ಸಮಯದಲ್ಲಿ ಎದುರುಗಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೮೪೪ ಚಾಲಕ ಗಂಗಪ್ಪ ಎಂಬುವರು ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಎನ್.ಸುಬ್ಬರಾವ್ ರವರಿಗೆ ಗಾಯಗಳುಂಟಾಗಿರುತ್ತದೆ.

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೦೮೩೦ ಗಂಟೆ ಸಮಯದಲ್ಲಿ ಕೋಲಾರ ಕೋಲಾರ ತಾಲೂಕು ಕೆಂಚಾಪುರ ಗ್ರಾಮದ ವಾಸಿ ಮಂಜುನಾಥ್ (೨೮) ಎಂಬುವರು ತಮ್ಮ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಎಲ್-೫೯೮೪ ರಲ್ಲಿ ಸೂಳದೇನಹಳ್ಳಿ ಗ್ರಾಮಲ್ಲೆ ಹೋಗುವ ಸಲುವಾಗಿ ಕ್ಯಾಲನೂರ್ ಕ್ರಾಸ್ ಕೆರೆ ತಿರುವಿನ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಎದುರುಗಡೆಯಿಂದ ಬಂದ ಮಿನಿ ಟೆಂಪೋ ಸಂಖ್ಯೆ ಎಪಿ-೦೩-ಯು-೪೭೬೫ ಚಾಲಕ ನಾರಾಯಣಮೂರ್ತಿ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮಂಜುನಾಥ್ ರವರಿಗೆ ಗಾಯಗಳುಂಟಾಗಿದ್ದು ಚಿಕತ್ಸೆಗಾಗಿ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

  •   ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೨-೨೦೦೭ ರಂದು ೦೮೩೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿ ಶ್ರೀನಿವಾಸ್ ಮತ್ತು ಇವರ ಹೆಂಡತಿ ಭಾಗ್ಯಮ್ಮ ಎಂಬುವರು ಟೆಂಪೋ ಸಂಖ್ಯೆ ಕೆಎ-೫೩-೪೯೧೨ ರಲ್ಲಿ ಕೋಲಾರದಿಂದ ಮುಳಬಾಗಿಲಿಗೆ ಹೋಗುವ ಸಲುವಾಗಿ ಎನ್.ಹೆಚ್ ರಸ್ತೆಯ ಕುಂಬಾರಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಟೆಂಪೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದು ಟೆಂಪೋ ಮುಗುಚಿ ಬಿದ್ದಿರುತ್ತದೆ.. ಇದರ ಪರಿಣಾಮ ಟೆಂಪೋವಿನಲ್ಲಿದ್ದ ಶ್ರೀನಿವಾಸ್ ಮತ್ತು ಭಾಗ್ಯಮ್ಮ ರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಅಸಂಡಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೦೫೦೦ ಗಂಟೆ ಸಮಯದಲ್ಲಿ ಅಸಂಡಹಳ್ಳಿ ಗ್ರಾಮದ ವಾಸಿ ಸಹದೇವಪ್ಪ (೪೦) ಎಂಬುವರ ಮೇಲೆ ಅದೇ ಗ್ರಾಮದ ವಾಸಿ ವೆಂಕಟೇಶಪ್ಪ ಹಾಗೂ ಇವರ ಮಕ್ಕಳಾದ ಶ್ರೀನಿವಾಸ, ಮಂಜುನಾಥ ಮತ್ತು ಲೋಕೇಶ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ನಾಗರೀಕ ಮತ್ತು ಮಹಿಳಾ ಪೊಲೀಸ್ ಪೇದೆ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

December 29, 2007

ಕೋಲಾರ ಜಿಲ್ಲೆಯ ಪೊಲೀಸ್ ಘಟಕದಲ್ಲಿ ಖಾಲಿ ಇರುವ ೧೨೫ ನಾಗರೀಕ ಪೊಲೀಸ್ ಪೇದೆ ಹಾಗೂ ೨೮ ಮಹಿಳಾ ಪೊಲೀಸ್ ಪೇದೆ ಹುದ್ದೆಗಳನ್ನು ೨೦೦೭ ನೇ ಸಾಲಿನ ನೇರ ನೇಮಕಾತಿ ಪ್ರಕ್ರಿಯೆಯ ಮುಖಾಂತರ ಆಯ್ಕೆ ಮಾಡಲಾಗಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ದಿನಾಂಕ ೦೯-೦೯-೨೦೦೭ ರಂದು ೪೬೭೦ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗಾಗಿ ಹಾಜರಾಗಿ ಪರೀಕ್ಷೆ ಬರೆದಿದ್ದು ಇದರಲ್ಲಿ ೧:೫ ಅನುಪಾತದಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ ೦೩-೧೨-೨೦೦೭ ರಿಂದ ೦೮-೧೨-೨೦೦೭ ರವರೆಗೆ ದೇಹದಾರ್ಡ್ಯತೆ / ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲಾಗಿರುತ್ತದೆ. ಅಂತಿಮವಾಗಿ ರೋಸ್ಟರ್ ಬಿಂದು ಮತ್ತು ವರ್ಗಗಳಿಗೆ ಅನುಸಾರವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳ ವಿವರ ಈ ಕೆಳಕಂಡಂತೆ ಇರುತ್ತದೆ.  ಈ ಆಯ್ಕೆ ಪಟ್ಟಿಯು ತಾತ್ಕಾಲಿಕವಾಗಿದ್ದು ಅಭ್ಯರ್ಥಿಯ ಗುಣ ನಡತೆ ಪರಿಶೀಲನೆ, ದಾಖಲಾತಿಗಳ ಪರಿಶೀಲನೆ ಹಾಗೂ ನ್ಯಾಯಾಲಯದ ಆದೇಶಗಳಿಗೆ ನಿರ್ಭರವಾಗಿರುವುದು.

ಮಹಿಳಾ ಪೊಲೀಸ್ ಪೇದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ:

Rool No

Name

Selection
Category

611731

JYOTHI M R

GM_0THERS

611106

PAVITHRA R

GM_0THERS

611850

CHANDRAKALA K

GM_0THERS

615666

HEMA N

GM_0THERS

614254

LAKSHMI P

GM_0THERS

613091

VEENA K M

GM_0THERS

611513

SHOBHARANI T

GM_0THERS

614556

RAMYA V

GM_0THERS

611133

MUNIRATHNAMMA TV

GM_0THERS

611452

MUNIRATHNAMMA TK

GM_KAN

615096

UMAVATHI S

3A_OTHERS

614706

VARALAKSHMI N

GM_RUR

613589

INDRANI P

SC_OTHERS

615572

RUKMANI H

GM_RUR

611276

SAVITHRI K C

3A_OTHERS

615194

AMBIKASONI R

GM_RUR

612418

REKHA DS

GM_RUR

613475

SHYLAJA T S

3B_OTHERS

614461

SARASWATHAMMA

SC_OTHERS

614594

KAMALA V

SC_OTHERS

612435

ANASUYAMMA BV

ST_OTHERS

613242

M K NASREEN TAJ

2B_OTHERS

611474

KAVITHA P V

SC_RUR

611809

ASHA TS

3B_OTHERS

611016

SUJATHA N

2A_OTHERS

611017

GAYATHRI N

2A_OTHERS

611882

SHILPA N

2A_RUR

615261

PREMAVATHI CS

01_OTHERS

 

ನಾಗರೀಕ ಪೊಲೀಸ್ ಪೇದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ:

Roll No

Name

Selection
Category

611131

MANJUNATH B N

GM_OTHERS

612337

NANDEESHA N V

GM_OTHERS

612451

MURTHY HM

GM_OTHERS

612684

NARAYANASWAMY

GM_OTHERS

615135

UDAYKUMAR V K F

GM_OTHERS

614444

HAJIMALANG H MULLA

GM_OTHERS

612454

VIJAYAKUMAR B

GM_OTHERS

611687

MANJUNATHA M S

GM_OTHERS

611428

MANJUNATHA M K

GM_OTHERS

612446

GANESHAN Y V

GM_OTHERS

611130

RAMESHA M

GM_OTHERS

611841

SUBRAMANI REDDY V

GM_OTHERS

612335

SRINIVASA N K

GM_OTHERS

615206

JANARDHANA H S

GM_OTHERS

612258

MANJUNATHA S

GM_OTHERS

614539

PRAKASH P M

GM_OTHERS

613951

BYREDDY S

GM_OTHERS

614666

SRINATHA M P

GM_OTHERS

615559

DIVAKARA B

GM_OTHERS

611857

SOMASHEKARA R

GM_OTHERS

613541

DHANANJAYA G L

GM_OTHERS

613983

DURUGAPPA HALLI

GM_OTHERS

613389

MANJUNATHA K

GM_OTHERS

611173

KRISHNAPPA S

GM_OTHERS

612456

SOMASHEKARA M

GM_OTHERS

614575

ABBASALI MANIYAR

GM_OTHERS

612261

RAMESH KUMAR M S

GM_OTHERS

613609

PRABHAKAR G S

GM_OTHERS

613860

RAMESHA V

GM_OTHERS

613773

JULAPPA N

GM_OTHERS

612347

BABU C

GM_OTHERS

613611

NANDAKUMAR KM

GM_OTHERS

613683

SHANKARA R

GM_OTHERS

611078

PURUSHOTHAM

GM_OTHERS

611557

SRIDHAR V L

GM_KAN

612297

MANJUNATHA T

GM_KAN

614184

C MUNIRAJA

GM_KAN

613870

SRINIVASA TV

GM_OTHERS (EXSERV)

612683

ANIL KUMAR V A

GM_OTHERS (EXSERV)

615087

SRIPATHI K N

GM_OTHERS (EXSERV)

612326

CHOWDAPPA Y V

GM_OTHERS (EXSERV)

613300

NATARAJA GB

GM_OTHERS (EXSERV)

612513

SRINIVASA C

GM_OTHERS (EXSER)

613471

BABU BR

GM_RUR

611387

CHANNAKESHAVA KV

GM_RUR

614361

CHAYAKUMAR S

2A_OTHERS

611449

SURESH KUMAR K N

GM_RUR

612486

PRAKASH N

3A_OTHERS

612448

GANESH KUMAR S

2A_OTHERS

614308

MUNISWAMY V

GM_RUR

611148

JAYSHEKARA C V

GM_RUR

614834

SANTHOSH KUMAR N

GM_RUR

611682

CHOWDA REDDY

GM_RUR

613450

NAGESHA M K

GM_RUR

613117

BASAVRAJA KUNCHURR

GM_RUR

614322

VENKATAREDDY M

GM_RUR

613862

VASU V

GM_RUR

612694

RAGHAVENDRA P S

GM_RUR

615279

ASHO A CM

GM_RUR

611500

GANESHA K C

GM_RUR

612706

VENKATESH K R

GM_RUR

611675

SRINIVASA M

3A_OTHERS

613976

LAKSHMIPATHY ML

01_OTHERS

614483

MARUTHI C G

3B_OTHERS

613488

RAJESH T N

3A_OTHERS

612735

VASUDEVA V

3A_OTHERS

612108

MUNIRAJU K M

SC_OTHERS

613883

SARVESHA A

3A_RUR

614635

VENKATESHAPPA KC

SC_OTHERS

613476

ANSAR BASHA

2B_OTHERS

611868

GIRISHA M R

01_OTHERS

613183

SHIVAPPA G N

2A_OTHERS

615596

NARASIMHAIAH M

SC_OTHERS

612619

MANJUNATHA M L

2A_OTHERS

614574

MALLESH LAMANI

GM_PDP

615383

BABAJAN B

2B_OTHERS

611081

BABAJAN VE

2B_OTHERS

612251

MANI V

01_OTHERS

613665

SARVESHA N

2A_OTHERS

614590

ANJANEYA G

2A_OTHERS

615469

NARASIMHAMURTHY D N

SC_OTHERS

611439

PRAVEVNKUMAR N

2A_OTHERS

611677

MUNIRAJU V N

SC_OTHERS

613731

NAGARAJA AR

2A_OTHERS

612572

ANANDAKUMAR K S

SC_OTHERS

614482

NAGARAJ

2A_OTHERS

613297

ROOPANATHA PRASAD RS

2A_OTHERS

615531

NARAYANASWAMY B

SC_OTHERS

612357

RAMESHA S V

ST_OTHERS

613127

KARIBABU B

ST_OTHERS

613672

NANDEESH KUMAR K

2A_OTHERS

615074

VENU HA

01_OTHERS

611450

VAJRESH KUMAR G

3B_OTHERS

612450

CHALAPATHY H C

SC_OTHERS

615587

RAMANJANEYA G

SC_OTHERS

615434

MUNIKRISHNA S

2A_OTHERS (PDP)

614281

ASWATHAPPA D N

ST_RUR

614450

SHIVAKUMAR A M

01_RUR

614387

VISHWANATHA N

SC_OTHERS

613082

RAJESH V

2A_KAN

615046

SHEIK SANAULLA

2B_OTHERS

611180

SANTHOSHA H M

SC_OTHERS

611729

SAMPATH KUMAR O

2A_OTHERS (EXSER)

611845

ARUNA KUMAR

SC_KAN

613666

GAJENDRA S

SC_OTHERS (EX SER)

612405

RAMESHA S

SC_OTHERS (EX SER)

613952

ANJINAPPA T L

SC_RUR

612264

SHANKARA R

SC_RUR

613343

ANANDA K

2A_OTHERS (EXSER)

611136

SUNIL KUMAR P N

3B_OTHERS

612246

MANJUNATHA HVV

SC_RUR

611278

VENKATARAGHAVAN K

2A_RUR

611497

SHIVAPPA S

SC_RUR

615082

SURESH RAMANNA MULIMANI

GM_PDP

613116

SHANKARAPPA H

SC_RUR

611105

SADASHIVAIAH M

2A_RUR

613382

MANJUNATHA V

2A_RUR

613607

SYEDAHMED NS

2B_RUR

614927

RAMESHBABU H

2A_RUR

612025

SHIVANNA V S

2A_RUR

611988

LOKESH MG

3B_OTHERS

615500

SOMASHEKAR G N

GM_PDP

612960

KRISHNOJIRAO

3B_RUR

612589

GIRISHA V C

3B_RUR

612179

CHALAPATHI N

SC_PDP

 


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಡಿಸೆಂಬರ್ ೦೭

December 29, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ --೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸುಲಿಗೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೧೨-೨೦೦೭ ರಂದು ೧೦೩೦ ಗಂಟೆ ಸಮಯದಲ್ಲಿ ಮಾಲೂರು ಪುರದ ಮಾರುತಿ ಬಡಾವಣೆ ವಾಸಿ ಎಂ.ಎಸ್.ಶ್ರೀಹರಿ ಎಂಬುವರ ಪತ್ನಿ ಶ್ರೀಮತಿ ಲಕ್ಷ್ಮಿ ರವರು ತಮ್ಮ ವಾಸದ ಮನೆಯಲ್ಲಿದ್ದರು. ಆ ಸಮಯದಲ್ಲಿ ಮನೆಯ ಒಳಗೆ ನುಗ್ಗಿದ ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ಒಂದು ಆಯುಧದಿಂದ ಲಕ್ಷ್ಮಿರವರಿಗೆ ಹೊಡೆದು ಕೊಲೆ ಮಾಡಿ ಅವರ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯದ ಸರ ಮತ್ತು ಮನೆಯ ಬೀರುವಿನಲ್ಲಿಟ್ಟಿದ್ದ ಒಂದು ನೆಕ್ಲೇಸ್, ೪ ಬಂಗಾರದ ಬಳೆಗಳು, ೨ ಉಂಗುರಗಳನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ. ಲಕ್ಷ್ಮಿರವರ ಪತಿ ಶ್ರೀಹರಿರವರು ವ್ಯಾಪಾರದ ನಿಮಿತ್ತ ತಮ್ಮಅಂಗಡಿಯಲ್ಲಿದ್ದಾಗ ಈ ಘಟನೆ ನಡೆದಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೧೩೪೫ ಗಂಟೆ ಸಮಯದಲ್ಲಿ ಕೋಲಾರ ಸಂಚಾರಿ ಪೊಲೀಸ್ ಠಾಣೆಯ ಪೇದೆ ೪೫೧ ಶ್ರೀನಿವಾಸಯ್ಯ ಎಂಬುವರು ಕೋಲಾರ ನಗರದ ಕಿತ್ತೂರುರಾಣಿ ಚನ್ನಮ್ಮ ವೃತ್ತದಲ್ಲಿ ಕತ್ವ್ಯ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಪಲ್ಲವಿವೃತ್ತದ ಕಡೆಯಿಂದ ಬಂದ ಕಾರ್ ಸಂಖ್ಯೆ ಕೆಎ-೧೬--೪೭೮೬ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಶ್ರೀನಿವಾಸಯ್ಯ ರವರಿಗೆ ಗಾಯಗಳುಂಟಾಗಿರುತ್ತದೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೧೦೧೫ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬುಚ್ಚಳ್ಳಿ ಗ್ರಾಮದ ವಾಸಿ ಲೋಕನಾಥ್ ಎಂಬುವರು ಟಿಎನ್-೩೨-ಎಕ್ಸ್-೦೦೫೬ ಸಂಖ್ಯೆಯ ಷಣ್ಮುಗ ಎಂಬ ಖಾಸಗಿ ಬಸ್ಸನ್ನು ಚಾಲನೆ ಮಾಡಿಕೊಂಡು ಕೆ.ಜಿ.ಎಫ್ತಾಯ್ಲೂರು ರಸ್ತೆಯಲ್ಲಿ ಮುಳಬಾಗಿಲು ಹೊರವಲಯದಲ್ಲಿರುವ ಜಿಗ್-ಜಾಗ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ತಾಯ್ಲೂರು ಕಡೆಯಿಂದ ಬಂದ ಟಾಟಾ ಸುಮೋ ಸಂಖ್ಯೆ ಟಿಎನ್-೨೦-ಎಕ್ಸ್-೫೩೬೫ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಣಾಮ ಬಸ್ ಹಾಗೂ ಟಾಟಾ ಸುಮೋ ಜಖಂಗೊಂಡಿರುತ್ತದೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೨-೨೦೦೭ ರಂದು ೦೬೦೦ ಗಂಟೆ ಸಮಯದಲ್ಲಿ ಕೋಲಾರ ಕೋಲಾರ ನಗರ ಕ್ಲಾಕ್ ಟವರ್ ವೃತ್ತದ ಬಳಿ ಸುಮಾರು ೪೦-೪೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಪಲ್ಲಿವಿ ವೃತ್ತದ ಕಡೆಯಿಂದ ಬಂದ ಟೆಂಪೋ ಸಂಖ್ಯೆ ಕೆಎ-೦೧--೧೧೫೧ ರ ಚಾಲಕ ಸುರೇಶ ಎಂಬುವರು ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆಗೆ ಗಾಯಗಳಾಗಿರುತ್ತದೆ. ಸ್ಥಳದಲ್ಲೇ ಇದ್ದ ಸೈಯದ್ ಅಮಾನುಲ್ಲಾ ಎಂಬುವರು ಗಾಯಾಳುವನ್ನು ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •    ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಉಪ್ಪುಕುಂಟೆ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೨೦೦೦ ಗಂಟೆ ಸಮಯದಲ್ಲಿ ಉಪ್ಪುಕುಂಟೆ ಗ್ರಾಮದ ವಾಸಿ ರಾಮಕೃಷ್ಣಪ್ಪ (೩೦) ಎಂಬುವರ ಮೇಲೆ ಅದೇ ಗ್ರಾಮದ ವಾಸಿಳಾದ ಕೃಷ್ಣಪ್ಪ ಮತ್ತು ಲಕ್ಷ್ಮಯ್ಯ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಮತ್ತು ಕಬ್ಬಿಣದ ರಾಡಿನಿಂದ ಹೊಡೆದು ಗಾಯಪಡಿಸಿರುತ್ತಾರೆ. ವೈಯಕ್ತಿಕ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮುದವಾಡಿಹೊಸಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೧೨-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಮುದವಾಡಿಹೊಸಹಳ್ಳಿ ಗ್ರಾಮದ ವಾಸಿ ವಿ.ನಾರಾಯಣಸ್ವಾಮಿ (೨೬) ಎಂಬುವರು ತಮ್ಮ ಮನೆಯ ಬಳಿ ಚಪ್ಪರ ಹಾಕುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಮಂಜುನಾಥ, ಮುನಿರತ್ನಮ್ಮ, ಚೌಡಪ್ಪ ಮತ್ತು ರತ್ನಮ್ಮ ಎಂಬುವರು ವಿ.ನಾರಾಯಣಸ್ವಾಮಿರವರ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಕೈಗಳಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾರೆ. ಪಪರಸ್ಪರರ ವಿರುದ್ದ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಡಿಸೆಂಬರ್ ೦೭

December 28, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮--೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೧

  •   ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೧೪೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಚಿಕ್ಕನಹಳ್ಳಿ ಗ್ರಾಮದ ವಾಸಿ ಬೀರೇಗೌಡ ಎಂಬುವರು ತನ್ನ ತಂದೆ ನಾರಾಯಣಸ್ವಾಮಿ (೫೦) ರವರೊಡನೆ ತಮ್ಮ ಹೀರೋಹೋಂಡಾ ಸಂಖ್ಯೆ ಕೆಎ-೦೭-ಕ್ಯೂ-೨೫೫೧ ದ್ವಿಚಕ್ರವಾಹನದಲ್ಲಿ ಶ್ರೀನಿವಾಸಪುರ ತಾಲೂಕು ಕಪ್ಪಲ್ಲಿ ಗ್ರಾಮದ ತಿರುವಿನ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಬೀರೇಗೌಡ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ಕಳೆದುಕೊಂಡಿದ್ದು ದ್ವಿಚಕ್ರವಾಹನ ಕೆಳಗೆ ಬಿದ್ದಿರುತ್ತದೆ. ಇದರ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ನಾರಾಯಣಸ್ವಾಮಿ ರವರಿಗೆ ತೀವ್ರವಾದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

-ಸಾಧಾರಣ: ೦೩

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೧೯೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಗೊಟ್ಟಿಕುಂಟೆ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರು ಶೀಗಹಳ್ಳಿ ಗ್ರಾಮದ ವಾಸಿ ಸಬ್ರಮಣಿರವರೊಡನೆ ಅವರ ಹೀರೊಹೋಂಡಾ ಸಂಖ್ಯೆ ಕೆಎ-೦೭-ಎಲ್-೮೫೫೬ ರಲ್ಲಿ ಶ್ರೀನಿವಾಸಪುರ ತಾಲೂಕು ನೆರ್ನಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಸುಬ್ರಮಣಿರವರು ಅತಿವೇಗ ಮತ್ತು ಅಜಾಗರೂಕತಯಿಂದ ಚಾಲನೆ ಮಾಡಿ ವಾಹನದ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡಿದ್ದು ವಾಹನ ಕೆಳಗೆ ಬಿದ್ದಿರುತ್ತದೆ. ಇದರ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ವೆಂಕಟೇಶಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ.

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಕೋಲಾರ ನಗರ ಹಾರೋಹಳ್ಳಿ ವಾಸಿಯಾದ ನವೀನ್ ಚಂದರ್ (೨೭) ಎಂಬುವರು ತಮ್ಮ ಬಜಾಜ್ ಸಿ.ಟಿ ೧೦೦ ಸಂಖ್ಯೆ ಕೆಎ-೧೧-ಎಲ್-೫೭೪೬ ದ್ವಿಚಕ್ರವಾಹನದಲ್ಲಿ ಹೊಸಕೋಟೆಯಿಂದ ಕೋಲಾರಕ್ಕೆ ಬರುವ ಸಲುವಾಗಿ ನರಸಾಪುರ ಬಳಿ ಎನ್.ಹೆಚ್ ೪ ರಸ್ತೆಯಲ್ಲಿ ಬರುತ್ತಿದ್ದರು. ಆ ಸಮಯದಲ್ಲಿ ಹಿಂಭಾಗದಿಂದ ಬಂದ ಲಾರಿ ಸಂಖ್ಯೆ ಕೆಎ-೦೧-೩೪೨೭ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರು‌ತ್ತಾನೆ. ಇದರ ಪರಿಣಾಮ ನವೀನ್ ಚಂದರ್ ರವರ ತಲೆಗೆ ಮತ್ತು ಭುಜಕ್ಕೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕುರುಡುಮಲೆ ಗ್ರಾಮದ ವಾಸಿಯಾದ ರಾಜೇಂದ್ರ ಎಂಬುವರು ತಮ್ಮ ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ಮುಳಬಾಗಿಲಿನ ಎಂ.ಸಿ ರಸ್ತೆಯ ಡಿ.ವಿ.ಜಿ ಶಿಕ್ಷಕರ ತರಬೇತಿ ಸಂಸ್ಥೆಯ ಮುಂದೆ ಬರುತ್ತಿದ್ದರು. ಸಮಯದಲ್ಲಿ ಎದುರುಗಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆಎ-೧೯-ಎಫ್-೧೭೬೯ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರು‌ತ್ತಾನೆ. ಇದರ ಪರಿಣಾಮ ರಾಜೇಂದ್ರ ರವರ ತಲೆಗೆ ಮತ್ತು ಭುಜಕ್ಕೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ನಲ್ಲೂರು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೧೨-೨೦೦೭ ರಂದು ೧೩೦೦ ಗಂಟೆಯ ಸಮಯದಲ್ಲಿ ನಲ್ಲೂರು ಗ್ರಾಮದ ವಾಸಿ ಚಂದ್ರಕಲಾ ಎಂಬುವರ ಮೇಲೆ ಅದೇ ಗ್ರಾಮದ ವಾಸಿ ಸುಮಿತಾ ಮತ್ತು ಇವರ ತಾಯಿ ರತ್ನಮ್ಮ ಎಂಬುವರು ಜಗಳ ತೆಗೆದು ಹಲ್ಲೆ ನಡೆಸಿರುತ್ತಾರೆ. ಚಂದ್ರಕಲಾರವರಿಗೆ ಸೇರಿದ ಜಮೀನಿನಲ್ಲಿ ಸುಮಿತಾರವರು ತಮ್ಮ ಹಸುಗಳನ್ನು ಮೇಯಿಸುತ್ತಿದ್ದು ಇದನ್ನು ಪ್ರತಿರೋಧಿಸಿದಾಗ ಆರೋಪಿಗಳು ಈ ಕೃತ್ಯ ಎಸಗಿರುತ್ತಾರೆ. ಇದೇ ವಿಷಯವಾಗಿ ಆರೋಪಿಗಳು ಚಂದ್ರಕಲಾರವರ ತಾಯಿಯ ಮೇಲೂ ಸಹಾ ಹಲ್ಲೆ ನಡೆಸಿರುತ್ತಾರೆ.

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಶೆಟ್ಟಿವಾರಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೦೩೦ ಗಂಟೆ ಸಮಯದಲ್ಲಿ ಶೆಟ್ಟಿವಾರಿಹಳ್ಳಿ ಗ್ರಾಮದ ವಾಸಿ ಗೋಪಾಲಪ್ಪ ಎಂಬುವರ ಮೇಲೆ ಅದೇ ಗ್ರಾಮದ ವಾಸಿ ಮಂಜುನಾಥ ಎಂಬುವರು ಜಗಳ ತೆಗೆದು ಕಾಲಿನಿಂದ ಒದ್ದು ಗಾಯಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೊಟ ೨೭ ನೇ ಡಿಸೆಂಬರ್ ೦೭

December 27, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ --೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಎಸ್.ಎನ್.ಆರ್ ಆಸ್ಪತ್ರೆಯ ವಸತಿಗೃಹ ಸಂಖ್ಯೆ ೬೬೦ ರ ಲಕ್ಷ್ಮಿನಾರಾಯಣಪ್ಪ ಎಂಬುವರಿಗೆ ಸೇರಿದ ವಾಸದಮನೆಯಲ್ಲಿ ಕಳ್ಳತನ ಸಂಭವಿಸಿರುತ್ತದೆ. ದಿನಾಂಕ ೨೬-೧೨-೨೦೦೭ ರಂದು ೦೭೩೦ ಗಂಟೆಯಿಂದ ೨೧೩೦ ಗಂಟೆ ನಡುವಿನ ಸಮಯದಲ್ಲಿ ಮನೆಯ ಮುಂಬಾಗಿಲಿನ ಡೋರ್ ಲಾಕನ್ನು ಕಿತ್ತು ಮನೆ ಒಳಗೆ ಪ್ರವೇಶಿಸಿದ ಯಾರೋಕಳ್ಳರು ಮನೆ ಬೆಡ್ ರೂಂನ ಸ್ಟೀಲ್ ಅಲ್ಮೇರಾದ ಬಾಗಿಲನ್ನು ಮುರಿದು ಅದರ ಒಳಗೆ ಇಟ್ಟಿದ್ದ ೬೮ ಗ್ರಾಂ ಚಿನ್ನದ ಒಡವೆಗಳು, ೨೦೦ ಗ್ರಾಂ ಬೆಳ್ಳಿ ಸಾಮಗ್ರಿಗಳು ಹಾಗೂ ರೂ. ೧೦,೦೦೦/ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಗದು ಸೇರಿದಂತೆ ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂ. ೬೭,೬೦೦/ ಆಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೧೨-೨೦೦೭ ರಂದು ೧೩೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಕಲ್ಲೂರು ಗ್ರಾಮದ ವಾಸಿಗಳಾದ ರೆಡ್ಡಪ್ಪ ಅತನ ಪತ್ನಿ ಹಾಗು ಮಗ ಸುಹಾಸ್ ಎಂಬುವರು ಚಿಂತಾಮಣಿ -ಶ್ರೀನಿವಾಸಪುರ ರಸ್ತೆಯ ಪಾತಪಲ್ಲಿಶೆಟ್ಟಿಹಳ್ಳಿ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ಅ ಸಮಯದಲ್ಲಿ ಶ್ರೀನಿವಾಸಪುರ ಕಡೆಯಿಂದ ಚಿಂತಾಮಣಿ ಕಡೆ ಹೋಗುತ್ತಿದ್ದ ಟಾಟೋ ಸುಮೋ ಸಂಖ್ಯೆ ಕೆಎ-೫೧-೧೨೯ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸುಹಾಸ್ ಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮವಾಗಿ ಸುಹಾಸ್ ಗೆ ರಕ್ತಗಾಯಗಳಾಗಿದ್ದು ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ. ಟಾಟೋ ಸುಮೋ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿರುತ್ತಾನೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಬುವನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೧೨-೨೦೦೭ ರಂದು ೧೫೦೦ ಗಂಟೆ ಸಮಯದಲ್ಲಿ ಬುವನಹಳ್ಳಿ ಗ್ರಾಮದ ವಾಸಿ ರುಕ್ಕಮ್ಮ (೨೫) ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಮುನಿರತ್ನಮ್ಮ ಮತ್ತು ಅಪ್ಪಯ್ಯ ಎಂಬುವರು ಜಗಳ ತೆಗೆದು ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ. ಆಸ್ತಿ ಪಾಲುಗಾರಿಕೆಗೆ ಸಂಬಂಧಿಸಿದ ವಿಚಾರದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೧೭೪೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪಟ್ಟಣದ ವಾಸಿ ಕು.ಸಂಗೀತ ತಂದೆ ಮುನಿಯಪ್ಪ ಎಂಬುವರು ಶ್ರೀನಿವಾಸಪುರದ ವಲ್ಲಭಾಯಿ ರಸ್ತೆಯಲ್ಲರುವ ಮನು ಹಾಲಿನ ಕೇಂದ್ರದಿಂದ ಹಾಲು ತರಲು ಹೋಗುತ್ತಿದ್ದರು. ಅ ಸಮಯದಲ್ಲಿ ವಲ್ಲಭಾಯಿ ರಸ್ತೆಯ ವಾಸಿಗಳಾದ ಲಕ್ಷ್ಮೀನರಸಮ್ಮ ಮತ್ತು ಇತರೆ ಇಬ್ಬರು ಕು.ಸಂಗೀತರವರನ್ನು ಅಡ್ಡಗಟ್ಟಿ ವಿನಾಕಾರಣ ಜಗಳ ತೆಗೆದು ಹೊಡೆದು ಅವಾಚ್ಚ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ.

ಇತರೆ: ೦೧

  •   ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆಯು ಕೋಲಾರದ ಸಹಕಾರ ಸಂಘಗಳ ಸಹಾಯಕ ನಿಭಂಧಕರ ಕಛೇರಿಯಲ್ಲಿ ದಿನಾಂಕ ೨೬-೧೨-೨೦೦೭ ರಂದು ೧೮೦೦ ಗಂಟೆಯಿಂದ ೨೭-೧೨-೨೦೦೭ ರ ೧೦೩೦ ಗಂಟೆಯ ಅವಧಿಯಲ್ಲಿ ನಡೆದಿರುತ್ತದೆ. ಯಾರೋ ದುರಾತ್ಮರು ಕಛೇರಿಯ ದಕ್ಷಿಣ ಭಾಗದಲ್ಲಿರುವ ಕಿಟಿಕಿಯ ಗಾಜನ್ನು ಹೊಡೆದು ಒಳಗೆ ಪ್ರವೇಶ ಮಾಡಿ ವ್ಯಾಜ್ಯ ಶಾಖೆಯ ಕೊಠಡಿಯಲ್ಲಿದ್ದ ಕಡತಗಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕಡತಗಳನ್ನು ನಾಶಪಡಿಸಿರುತ್ತಾರೆ. ಈ ಬಗ್ಗೆ ಕೋಲಾರ ಉಪ-ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಭಂಧಕರಾದ ಶ್ರೀ ಜಿ.ಪ್ರಕಾಶ್ ರವರು ದೂರು ದಾಖಲಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಡಿಸೆಂಬರ್ ೦೭

December 26, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬--೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೨೦೧೫ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಮಂಗಾಪುರ ಗ್ರಾಮದ ವಾಸಿ ಮುನಿರಾಜು ರವರು ತಮ್ಮ ಸ್ನೇಹಿತ ಪುರುಸನಹಳ್ಳಿ ಗ್ರಾಮದ ವಾಸಿ ಆಂಜಿನಪ್ಪ ರವರ ದ್ವಿಚಕ್ರವಾಹನ ಸ್ಕೂಟರ್ ಸಂಖ್ಯೆ ಕೆಎ-೦೭-ಹೆಚ್-೭೭೫೯ ರಲ್ಲಿ ತಮ್ಮ ಗ್ರಾಮದಿಂದ ಗೊಲ್ಲಹಳ್ಳಿ ಗ್ರಾಮಕ್ಕೆ ಹೋಗುವ ಸಲುವಾಗಿ ನೂಸಗೆರೆ ಕ್ರಾಸ್ ಸಮೀಪ ಹೋಗುತ್ತಿದ್ದರು. ಸಮಯದಲ್ಲಿ ಯಾವುದೋ ಒಂದು ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮುನಿರಾಜು ರವರ ತಲೆಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮೇಡಿಹಾಳ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೧೫೦೦ ಗಂಟೆಗೆ ಮೇಡಿಹಾಳ ಗ್ರಾಮದ ವಾಸಿ ನಾರಾಯಣಪ್ಪ ಎಂಬುವರ ಮೇಲೆ ಅದೇ ಗ್ರಾಮದ ವಾಸಿ ಮುನಿಯಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕುಡುಗೋಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ. ನಾರಾಯಣಪ್ಪ ಮತ್ತು ಮುನಿಯಪ್ಪ ಸಹೋದರರಾಗಿದ್ದು ಮುನಿಯಪ್ಪರವರ ಜಮೀನಿನಲ್ಲಿ ನಾರಾಯಣಪ್ಪರವರು ತಮ್ಮ ಹಸು ಕಟ್ಟಿದ್ದರಿಂದ ಕೋಪಗೊಂಡ ಮುನಿಯಪ್ಪ ಕೃತ್ಯ ಎಸಗಿರುತ್ತಾರೆ.

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೭ ರಂದು ೧೬೦೦ ಗಂಟೆ ಕೋಲಾರ ತಾಲೂಕು ಮಣಿಗಟ್ಟ ಗ್ರಾಮದ ವಾಸಿ ಮಂಜುಳಾ (೩೦) ಎಂಬುವರು ತಮ್ಮ ವಾಸದ ಮನೆಯಲ್ಲಿದ್ದರು. ಆ ಸಮಯದಲ್ಲಿ ಮನೆಯೊಳಗೆ ಅಕ್ರಮವಾಗಿ ನುಗ್ಗಿದ ಅದೇ ಗ್ರಾಮದ ವಾಸಿ ಮುನಿರಾಜು ಎಂಬುವರು ಮಂಜುಳಾ ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಾಯಪಡಿಸಿರುತ್ತಾನೆ. ಮಂಜುಳಾ ರವರ ಬಾವ ಪ್ರಕಾಶ್ ರವರ ಭಾವಚಿತ್ರವನ್ನು ರಾಜಕೀಯ ಬ್ಯಾನರ್ ಒಂದರಲ್ಲಿ ಹಾಕಿರುವ ವಿಚಾರವಾಗಿ ಈ ಕೃತ್ಯ ಸಂಭವಿಸಿರುತ್ತದೆ.

ಇತರೆ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಜಯನಗರದ ವಾಸಿ ಪಿ.ಮಂಜುನಾಥ್ (೫೦) ಎಂಬುವರ ಮಗ ಹೆಚ್.ಎಂ.ದೀಪಕ್ (೧೪) ಎಂಬ ಬಾಲಕ ಅಪಹರಣಕ್ಕೀಡಾದವನು. ದೀಪಕ್ ಮಹಿಳಾಸಮಾಜ ಶಾಲೆಯಲ್ಲಿ ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು ದಿನಾಂಕ ೨೪-೧೨-೨೦೦೭ ರಂದು ೧೭೦೦ ಗಂಟೆ ಸಮಯದಲ್ಲಿ ಶಾಲೆಯನ್ನು ಮುಗಿಸಿಕೊಂಡು ತನ್ನ ಮನೆಗೆ ಬರುವ ಸಲುವಾಗಿ ಕೋಲಾರದ ರೈಲ್ವೆ ಸ್ಟೇಷನ್ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಅಲ್ಲಿಗೆ ಬಂದ ಸುಮಾರು ೨೦-೨೫ ವರ್ಷ ವಯಸ್ಸಿನ ಜನ ಅಪರಿಚಿತರು ದೀಪಕ್ ನನ್ನು ಹಿಡಿದುಕೊಂಡು ಒಂದು ಚೀಲದೊಳಗೆ ಹಾಕಿಕೊಂಡು ಅಪಹರಿಸಿಕೊಂಡು ಹೋಗಿದ್ದು ಕೋಲಾರ ಆ‌ರ್.ಟಿ. ಕಛೇರಿ ಹಿಂದೆ ಬಾಲಕನ್ನು ಹೊರ ತೆಗೆದು ಅಲ್ಲಿಂದ ಬಾಲಕನ ತಂದೆ ಪಿ.ಮಂಜುನಾಥ್ ರವರಿಗೆ ದೂರವಾಣಿ ಮಾಡಿ ಬಿಡುಗಡೆಗಾಗಿ ಲಕ್ಷ ರೂ ನೀಡುವಂತೆ ಒತ್ತಾಯಿಸಿರುತ್ತಾರೆ. ಸ್ಥಳದಲ್ಲೇ ಇದ್ದ ಸಾರ್ವಜನಿಕರ ಸಹಾಯದಿಂದ ಬಾಲಕ ಬಿಡುಗಡೆಹೊಂದಿ ತನ್ನ ಮನೆ ಸೇರಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಮಿಂಡಹಳ್ಳಿ ಗ್ರಾಮದ ವಾಸಿ ಅಂಜನ್ ರಾವ್ ಎಂಬುವರು ಮೃತಪಟ್ಟವರು. ಅಂಜನ್ ರಾವ್ ರವರಿಗೆ ವಿಪರೀತವಾದ ಕುಡಿನದ ಚಟ ಇದ್ದು ದಿನಾಂಕ ೨೫-೧೨-೨೦೦೭ ರಂದು ಮಿಂಡಹಳ್ಳಿ ಗ್ರಾಮದ ಗೌರಮ್ಮ ಎಂಬುವರ ಮನೆಯಲ್ಲಿ ಮೃತಪಟ್ಟಿರುತ್ತಾರೆ. ಅಂಜನ್ ರಾವ್ ರವರ ಪುತ್ರ ಎಂ..ವೇಣು ರವರು ದೂರು ನೀಡಿದ್ದು ಗೌರಮ್ಮ ರವರ ಮೇಲೆ ಸಂಶಯ ಇರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗಾಗಿ ಬಂದೂಕು ತರಬೇತಿ

December 26, 2007

ಆತ್ಮರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗಾಗಿ ದಿನಾಂಕ ೦೭-೦೧-೨೦೦೮ ರಿಂದ ೭ ದಿನಗಳ ಕಾಲ ಬಂದೂಕು ತರಬೇತಿಯನ್ನು ಆಯೋಜಿಸಲಾಗಿರುತ್ತದೆ.  ತರಬೇತಿಯನ್ನು ಮೇಲ್ಕಂಡ ದಿನಗಳಲ್ಲಿ ಪ್ರತಿದಿನ  ಬೆಳಿಗ್ಗೆ ೦೭೩೦ ಗಂಟೆಯಿಂದ ೦೯೦೦ ಗಂಟೆಯ ಅವಧಿಯಲ್ಲಿ ನೀಡಲಾಗುತ್ತದೆ. ತರಬೇತಿಯ ವೆಚ್ಚ ರೂ. ೩೦೦/ ಆಗಿದ್ದು ಆಸಕ್ತ ನಾಗರೀಕರು ಅರ್ಜಿಯನ್ನು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಗಲ್ ಪೇಟೆ, ಕೋಲಾರ ಇಲ್ಲಿ ಪಡೆಯಬಹುದಾಗಿರುತ್ತದೆ. ಮತದಾರರ ಗುರುತಿನ ಚೀಟಿ ಮತ್ತು ಮೂರು ಭಾವಚಿತ್ರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ ೦೫-೦೧-೨೦೦೮ ರ ಒಳಗಾಗಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಗಲ್ ಪೇಟೆ, ಕೋಲಾರ ಇಲ್ಲಿ ಸಲ್ಲಿಸಬಹುದು.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಡಿಸೆಂಬರ್ ೦೭

December 25, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫--೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೦೩೧೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ವೆಂಕಟಾಪುರ ಗ್ರಾಮದ ವಾಸಿ ಪ್ರಕಾಶ್ ಎಂಬುವರು ಮುಳಬಾಗಿಲು ಟೌನ್ ವೈಶ್ಯ ಬ್ಯಾಂಕ್ ಮುಂದಿನ ಆಟೋನಿಲ್ದಾಣದ ಬಳಿ ರಸ್ತೆಯ ಮತ್ತೊಂದು ಬದಿಗೆ ಹೋಗುವ ಸಲುವಾಗಿ ರಸ್ತೆಯನ್ನು ದಾಟುತ್ತಿದ್ದರು. ಆ ಸಮಯದಲ್ಲಿ ನರಸಿಂಹತೀರ್ಥ ಕಡೆಯಿಂದ ಬಂದ ಗೂಡ್ಸ್ ಟೆಂಪೋ ಸಂಖ್ಯೆ ಕೆಎ-೫೩-೨೧೯೬ ವಾಹನದ ಚಾಲಕ ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಪ್ರಕಾಶ್ ರವರ ತಲೆಗೆ ಮತ್ತು ಮೈಕೈಗಳಿಗೆ ಗಾಯಗಳುಂಟಾಗಿರುತ್ತದೆ.

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೭೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಜಯಮಂಗಲ ಗ್ರಾಮದ ವಾಸಿ ವೆಂಕಟಗಿರಿಯಪ್ಪ ರಂಬುವರು ವಾಯುವಿಹಾರದ ಸಲುವಾಗಿ ಮಾಲೂರು-ಹೊಸೂರು ರಸ್ತೆಯಲ್ಲಿ ತಮ್ಮ ಗ್ರಾಮದ ಸಮೀಪ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂಬಾಗದಿಂದ ಬಂದ ಕೆಎ-೦೫-ಇಎಫ್-೧೩೮೦ ಸಂಖ್ಯೆಯ ದ್ವಿಚಕ್ರ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ವೆಂಕಟಗಿರಿಯಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಆಲಂಬಾಡಿ ಗ್ರಾಮದ ಕೆರೆಕಟ್ಟೆಯ ಮೇಲೆ ಕೃತ್ಯ ನಡೆದಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೭೩೦ ಗಂಟೆಯಲ್ಲಿ ಮಾಲೂರು ತಾಲೂಕು ರಾಜಕೃಷ್ಣಪುರ ಗ್ರಾಮದ ವಾಸಿ ಮುನಿರಾಜು ಎಂಬುವರ ಮೇಲೆ ಅದೇ ಗ್ರಾಮದ ವಾಸಿ ಚಂದ್ರಪ್ಪ ಎಂಬುವರು ಜಗಳ ಮಾಡಿ ತನ್ನ ಬಳಿ ಇದ್ದ ಖಾಲಿ ಬ್ರಾಂದಿ ಬಾಟಲ್ ನಿಂದ ಹೊಡೆದು ಗಾಯ ಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ನಂಗಲಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಎಂ.ಗೊಲ್ಲಹಳ್ಳಿ ಗ್ರಾಮದ ವಾಸಿ ಗಟಪ್ಪ ಎಂಬುವರು ಮೃತಪಟ್ಟವರು. ದಿನಾಂಕ ೨೩-೧೨-೨೦೦೭ ರಂದು ಗಟಪ್ಪರವರು ತಮ್ಮ ತೋಟದಲ್ಲಿ ನೀರುಹಾಯಿಸುತ್ತಿದ್ದು ಕೊಳವೆ ಬಾವಿಯ ಬಳಿ ಕಾಲು ಎಡವಿ ಬಿದ್ದ ಪರಿಣಾಮ ತಲೆಗೆ ಗಾಯವಾಗಿದ್ದು ಪ್ರಜ್ಞಾಹೀನರಾಗಿರುತ್ತಾರೆ. ಆರ್.ಎಲ್.ಜಾಲಪ್ಪ ಆಸ್ಪತ್ರೆ, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ದಿನಾಂಕ ೨೪-೧೨-೨೦೦೭ ರಂದು ೧೩೩೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಡಿಸೆಂಬರ್ ೦೭

December 24, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪--೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೨

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಹೊಸಕೋಟೆ ವಿ.ವಿ ಬಡಾವಣೆಯ ವಾಸಿ ರವಿ ಎಂಬುವರಿಗೆ ಸೇರಿದ ಕೋಲಾರ ತಾಲೂಕು ಬೆಳ್ಳೂರು ಗ್ರಾಮದಲ್ಲಿರುವ ಸರ್ವೆ ನಂ. ೩೮೪/೦೨ ಜಮೀನಿನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೧೨-೨೦೦೭ ರಂದು ರಾತ್ರಿ ಯಾರೋಕಳ್ಳರು ಜಮೀನಿನಲ್ಲಿರುವ ತೋಟದ ಮನೆಯೊಳಗೆ ನುಗ್ಗಿ ಅಲ್ಲಿದ್ದ ಟೆಕ್ಸ್ ಮೋ ಮೋಟರ್ ಸ್ಟಾರ್ಟರ್ ಮತ್ತು ಇತರೇ ಉಪಕರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಉಪಕರಣಗಳ ಒಟ್ಟು ಮೌಲ್ಯ ರೂ. ೫೦೦೦/ ಆಗಿರುತ್ತದೆ.

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ತೊಂಡಾಳ ಗ್ರಾಮದ ವಾಸಿ ನಂಜುಂಡಪ್ಪ (೩೦) ಎಂಬುವರಿಗೆ ಸೇರಿದ ಒಂದು ಮೇಕೆಯನ್ನು ಅದೇ ಗ್ರಾಮದ ವಾಸಿ ಬಾಬು (೩೦) ಎಂಬುವನು ಕಳವು ಮಾಡಿ ಸಿಕ್ಕಿ ಬಿದ್ದಿರುತ್ತಾನೆ. ದಿನಾಂಕ ೨೩-೧೨-೨೦೦೭ ರಂದು ೨೦೦೦ ಗಂಟೆ ಸಮಯದಲ್ಲಿ ಆರೋಪಿ ನಂಜುಡಪ್ಪ ರವರ ವಾಸದ ಮನೆಯ ಬಳಿಯಿಂದ ಮೇಕೆಯನ್ನು ಕಳವು ಮಾಡಿರುತ್ತಾನೆ. ಕಳುವಾದ ಮೇಕೆಯನ್ನು ಹುಡುಕಾಡುತ್ತಿರುವಾಗ ಆರೋಪಿ ಕಳವು ಮಾಲಿನೊಂದಿಗೆ ಗ್ರಾಮದ ಜನರಿಗೆ ಸಿಕ್ಕಿಬಿದ್ದಿರುತ್ತಾನೆ. ಕಳುವು ಮಾಡಿದ್ದ ಮೇಕೆಯ ಬೆಲೆ ರೂ. ೫೦೦೦/ ಆಗಿರುತ್ತದೆ. ಬಂಧಿ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಶಹಿಂಶಾನಗರದ ವಾಸಿ ಸೈಯದ್ ಯಾಸೀನ್ ಎಂಬುವರಿಗೆ ಸೇರಿದ ಬಜಾಜ್ ಪಲ್ಸರ್ ಸಂಖ್ಯೆ ಕೆಎ-೦೭-ಎಲ್-೭೪೯೩ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೦೫-೧೨-೨೦೦೭ ರಂದು ಸೈಯದ್ ಯಾಸೀನ್ ರವರು ದ್ವಿಚಕ್ರವಾಹನವನ್ನು ತಮ್ಮ ವಾಸದಮನೆಯ ಮುಂದೆ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ದ್ವಿಚಕ್ರ ವಾಹನದ ಬೆಲೆ ರೂ. ೪೮,೦೦೦/ ಆಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೦೬೧೫ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ಸುಂಡರಹಳ್ಳಿ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ ಮತ್ತು ಮುನಿರಾಜಪ್ಪ (೨೬) ಎಂಬುವರು ಮಾಲೂರು ತಾಲೂಕು ಹೊಸೂರು-ಮಾಲೂರು ರಸ್ತೆಯ ಜಯಮಂಗಲ ಗ್ರಾಮದ ಬಳಿ ತಮ್ಮ ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಸಮಯದಲ್ಲಿ ಹೊಸೂರು ಕಡೆಯಿಂದ ಬಂದ ಲಾರಿ ಸಂಖ್ಯೆ ಟಿಎನ್-೨೫-ವಿ-೪೮೬೯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮುನಿರಾಜಪ್ಪ (೨೬) ಎಂಬುವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿರುತ್ತಾನೆ.

-ಸಾಧಾರಣ: ೦೩

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೨-೨೦೦೭ ರಂದು ೧೪೦೦ ಗಂಟೆ ಸಮಯದಲ್ಲಿ ಮೆಸಗಾನಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ಎಂಬುವರು ತಮ್ಮ ಸೈಕಲ್ ನಲ್ಲಿ ಕೋಲಾರ ತಾಲೂಕು ಹೆಬ್ಬಟ್ಟಿ ಗ್ರಾಮದ ಬಳಿ ರಸ್ತೆಯಲ್ಲಿ ಹೋಗುತ್ತಿದ್ದರು. ಸಮಯದಲ್ಲಿ ಎದುರುಗಡೆಯಿಂದ ಬಂದ ಟೆಂಪೋ ಸಂಖ್ಯೆ ಕೆಎ-೦೩-ಎಲ್-೧೨೩೫ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಸೈಕಲ್ ಸವಾರ ನಾರಾಯಣಸ್ವಾಮಿರವರಿಗೆ ಗಾಯಗಳುಂಟಾಗಿರುತ್ತದೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೧೪೪೦ ಗಂಟೆಗೆ ಬಾಗೇಪಲ್ಲಿ ತಾಲೂಕು ಸಡ್ಲವಾರಿಪಲ್ಲಿ ಗ್ರಾಮದ ವಾಸಿ ಶಿವಶಂಕರ್ (೩೨) ರವರು ತಮ್ಮ ಟಾಟಾ ಇಂಡಿಕಾ ಕಾರ್ ಸಂಖ್ಯೆ ಕೆಎ-೦೩-ಸಿ-೧೦೩೬ ವಾಹನದಲ್ಲಿ ಮುಳಬಾಗಿಲಿನಿಂದ ಕೋಲಾರಕ್ಕೆ ಹೋಗುತ್ತಿದ್ದರು. ಉಟಕ್ಕಾಗಿ ಎನ್.ಹೆಚ್ ೪ ರಸ್ತೆಯ ವುಡ್ಡೀಸ್ ಹೋಟೆಲ್ ಬಳಿ ಕಾರನ್ನು ನಿಲ್ಲಿಸುವಾಗ ಕಾರಿನ ಚಾಲಕ ಆಂದ್ರಪ್ರದೇಶ ವಿಕೋಟ ವಾಸಿ ಶ್ರೀನಿವಾಸಲು ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಹುಣಸೆ ಮರಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರಿನ ಹಿಂಬಾಗ ಜಖಂಗೊಂಡಿರುತ್ತದೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೨-೨೦೦೭ ರಂದು ೦೮೦೦ ಗಂಟೆ ಸಮಯದಲ್ಲಿ ಬೆಂಗಳೂರು ರಾಜೇಂದ್ರ ನಗರದ ವಾಸಿ ಮುಜಾಹಿದ್ (೩೮) ಎಂಬುವರು ತಮ್ಮ ಕಾರ್ ಸಂಖ್ಯೆ ಕೆಎ-೦೪-ಸಿ-೧೨೩೩ ವಾಹನದಲ್ಲಿ ಬಾಡಿಗೆಗಾಗಿ ಶಿವಶಂಕರಪ್ಪ ಮತ್ತು ತಿಮ್ಮಪ್ಪ ಎಂಬುವರೊಂದಿಗೆ ಮುಳಬಾಗಿಲು ಹೊರವಲಯದ ತಾಯ್ಲೂರು ಕ್ರಾಸ್ ಬಳಿ ಗೋಗುತ್ತಿದ್ದರು. ಆ ಸಮಯದಲ್ಲಿ ತಾಯ್ಲೂರು ಕಡೆಯಿಂದ ಬಂದ ಕೆಎ-೦೭-೬೭೮೩ ಸಂಖ್ಯೆಯ ಖಾಸಗಿ ಬಸ್ ನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರಿನಲ್ಲಿದ್ದ ಮುಜಾಹಿದ್ ಮತ್ತು ಶಿವಶಂಕರಪ್ಪ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •    ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೨-೨೦೦೭ ರಂದು ೧೯೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಕಾರಂಗುಟ್ಟೆ ಗ್ರಾಮದಲ್ಲಿ ಕೃತ್ಯ ನಡೆದಿರುತ್ತದೆ. ಕಾರಂಗುಟ್ಟೆ ಗ್ರಾಮದ ವಾಸಿ ಕೆ.ಶಿವರಾಜು ಎಂಬುವರ ಮೇಲೆ ಅದೇ ಗ್ರಾಮದ ವಾಸಿ ರಾಜೇಶ್ ಎಂಬುವರು ಹಲ್ಲೆ ನಡೆಸಿ ಗಾಯ ಪಡಿಸಿರುತ್ತಾರೆ. ಕೆ.ಶಿವರಾಜು ಮತ್ತು ರಾಜೇಶ್ ಸಂಬಂಧಿಗಳಾಗಿದ್ದು ಕೆ.ಶಿವರಾಜು ರವರ ಚಿಕ್ಕಪ್ಪನ ಮಗನಾದ ವೆಂಕಟೇಶ ಎಂಬುವರು ಮೃತಪಟ್ಟಿದ್ದು ಈ ವಿಚಾರಚನ್ನು ತನಗೆ ತಿಳಿಸಲಿಲ್ಲ ಎಂಬ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿರುತ್ತಾನೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.