ರಾಯಲ್ಪಾಡು ಪೊಲೀಸರ ಕಾರ್ಯಾಚರಣೆ: ರೂ. ೧ ಲಕ್ಷ ಮೌಲ್ಯದ ಅಕ್ರಮ ಮಧ್ಯ ವಶ, ಒಬ್ಬನ ಬಂಧನ

April 30, 2008

ದಿನಾಂಕ ೩೦-೦೪-೨೦೦೮ ರಂದು ೦೩೧೫ ಗಂಟೆ ಸಮಯದಲ್ಲಿ ಮುಳಬಾಗಿಲು ಉಪವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಶ್ರೀ ಹೆಚ್.ಆರ್‍.ಧರಣೇಂದ್ರ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ಬಟ್ಟುವಾರಿಪಲ್ಲಿ ಕ್ರಾಸ್ ಬಳಿ ದಾಳಿ ನಡೆಸಿ ಟಾಟಾ ಮೋಟಾರ್‍ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ರೂ. ೧ ಲಕ್ಷ ಮೌಲ್ಯದ ಅಕ್ರಮ ಮಧ್ಯವನ್ನು ವಶಪಡಿಸಿಕೊಂಡಿರುತ್ತಾರೆ.  ಆರೋಪಿ ಆಂದ್ರಪ್ರದೇಶ ಮದನಪಲ್ಲಿ ಟೌನ್ ವಾಸಿ ಚಲಪತಿ(೩೦) ಎಂಬುವನನ್ನು ಬಂಧಿಸಲಾಗಿರುತ್ತದೆ. ಕಾರ್ಯಾಚರಣೆ ವೇಳೆ ಟಾಟಾ ಮೋಟಾರ್‍ ವಾಹನ ಸಂಖ್ಯೆ ಕೆಎ-೦೭-೭೦೭೩ ವಾಹನವನ್ನು ಹಾಗೂ ಅದರಲ್ಲಿ ಸಾಗಾಣಿಕೆ ಮಾಡುತ್ತಿದ್ದ ೧೮೦ ಎಂ.ಎಲ್ ನ ೪೮ ಬಾಟಲ್ ಗಳನ್ನು ಹೊಂದಿದ್ದ ಒಟ್ಟು ೯೦ ಬಾಕ್ಸ್ ವಿಸ್ಕಿ ಮಧ್ಯವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗೆ ದಿನಾಂಕ ೧೩-೦೪-೨೦೦೮ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.  


ಮಾಲೂರು ಪೊಲೀಸರ ಕಾರ್ಯಾಚರಣೆ: ಅಕ್ರಮ ಸಾರಾಯಿ ವಶ, ಒಬ್ಬನ ಬಂಧನ

April 30, 2008

ದಿನಾಂಕ ೩೦-೦೪-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಮಾಲೂರು ಪೊಲೀಸ್ ಠಾಣೆಯ ಪೇದೆ ೭೭೬ ಮತ್ತು ೧೪೨ ರವರು ಮಾಲೂರು ತಾಲೂಕು ಕೋರಂಡಿಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುತ್ತಾರೆ.  ಆರೋಪಿ ಕೋರಂಡಹಳ್ಳಿ ಗ್ರಾಮದ ವಾಸಿ ಎಂ.ಗೋಪಾಲಪ್ಪ ಎಂಬುವನು ಅಕ್ರಮವಾಗಿ ತನ್ನ ಮನೆಯಲ್ಲಿ ೫ ಲೀಟರ್‍ ಪ್ಲಾಸ್ಟಿಕ್ ಕ್ಯಾನಿನಲ್ಲಿ ಸಾರಾಯಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಸಿಬ್ಬಂದಿಯವರು ಗಸ್ತು ಕರ್ತವ್ಯದಲ್ಲಿದ್ದಾಗ ಸಿಕ್ಕಿ ಬಿದ್ದಿರುತ್ತಾನೆ.  ಕ್ಯಾನಿನಲ್ಲಿದ್ದ ೫ ಲೀಟರ್‍ ಸಾರಾಯಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಏಪ್ರಿಲ್ ೦೮

April 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೪-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ನಗರ ಕೀಲುಕೋಟೆ ಬಡಾವಣೆಯ ವಾಸಿ ಬಿ.ಕೆ.ಕೃಷ್ಣಪ್ಪ (೫೦) ಎಂಬುವರ ವಾಸದಮನೆಯಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೯-೦೪-೨೦೦೮ ರಂದು ರಾತ್ರಿ ಬಿ,ಕೆ.ಕೃಷ್ಣಪ್ಪ ರವರು ತಮ್ಮ ಸಂಭಂದಿಕರ ಮದುವೆಗೆ ಹೋಗುವ ಸಲುವಾಗಿ ಮನೆಗೆ ಬೀ ಹಾಕಿಕೊಂಡು ಹೋಗಿದ್ದರು.  ದಿನಾಂಕ ೨೮-೦೪-೨೦೦೮ ರಂದು ರಾತ್ರಿ ಮನೆಯ ಬಾಗಿಲನ್ನು ಹೊಡೆದು ಮನೆಯೊಳಗೆ ಪ್ರವೇಶಿಸಿದ ಯಾರೋ ಕಳ್ಳರು ಮನೆಯ ಸ್ಟೀಲ್ ಅಲ್ಮೇರಾದಲ್ಲಿ ಇಟ್ಟಿದ್ದ ನಗದು ರೂ. ೮೬,೦೦೦/ ಹಾಗೂ ಚಿನ್ನದ ಒಡವೆಗಳೂ ಸೇರಿದಂತೆ ಒಟ್ಟು ರೂ. ೧,೦೯,೦೦೦/ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ 

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ 

ಹಲ್ಲೆ: ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಬುನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೫-೦೪-೨೦೦೮ ರಂದು ೨೩೩೦ ಗಂಟೆ ಸಮಯದಲ್ಲಿ ಬುನಹಳ್ಳಿ ಗ್ರಾಮದ ವಾಸಿ ರಾಜಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಬೈರೇಗೌಡ, ಆನಂದ, ಚಂದ್ರಪ್ಪ ಮತ್ತು ನಂಜೇಗೌಡ ಎಂಬುವರು ಕೈಗಳಿಂದ, ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ. ಪರಸ್ಪರರ ನಡುವಿನ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿದ್ದು ಗಾಯಾಳು ರಾಜಪ್ಪ ಚಿಕಿತ್ಸೆಗಾಘಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ಮುತ್ಯಾಲಪೇಟೆಯಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೯-೦೪-೨೦೦೮ ರಂದು ೨೩೩೦ ಗಂಟೆ ಸಮಯದಲ್ಲಿ ಮಳಬಾಗಿಲು ತಾಲೂಕು ತಾಯ್ಲೂರು ಗ್ರಾಮದ ವಾಸಿ ಕಿರಣ್ ಕುಮಾರ್‍ ರವರು ಗಂಗಶಿರಸ್ಸು ಕಾರ್ಯಕ್ರಮದ ಮೆರವಣಿಗೆಯಲ್ಲಿ ಇದ್ದರು.  ಆ ಸಮಯದಲ್ಲಿ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬನು ಏಕಾಏಕಿ ತನ್ನ ಬಳಿ ಇದ್ದ ಚಾಕುವಿನಿಂದ ಕಿರಣ್ ಕುಮಾರ್‍ ರವರ ಹೊಟ್ಟೆಯ ಮೇಲ್ವಾಗಕ್ಕೆ ತಿವಿದು ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿರುತ್ತಾನೆ. 

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ತಾಲೂಕು ತೊಂಡಾಲನಾಯಕರಹಳ್ಳಿ ಗ್ರಾಮದ ವಾಸಿ ರಹಮಾನ್ ಬೇಗ್ ಎಂಬುವರು ಮೃತಪಟ್ಟಿರುತ್ತಾರೆ.  ದಿನಾಂಕ ೨೭-೦೪-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ರಹಮಾನ್ ಬೇಗ್ ರವರು ತಮ್ಮ ಮನೆಯ ಬಳಿ ಇರುವ ನುಗ್ಗೇಕಾಯಿ ಮರದಲ್ಲಿ ನುಗ್ಗೇಕಾಯಿ ಕೀಳಲು ಹತ್ತಿದ್ದು ಆಕಸ್ಮಿಕವಾಗಿ ಮರದ ರೆಂಬೆ ಮುರಿದು ಕೆಳಗೆ ಬಿದ್ದಿರುತ್ತಾರೆ.  ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಫಲಕಾರಿಯಾಗದೇ ದಿನಾಂಕ ೨೮-೦೪-೨೦೦೮ ರಂದು ರಾತ್ರಿ ಮೃತಪಟ್ಟಿರುತ್ತಾರೆ.  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ೧೩

ಮಾಲೂರು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಮಾಲೂರು ಪುರದ ವಾಸಿಗಳಾದ ಅಮರ್‍ಸಿಂಗ್ , ಮಂಜುನಾಥರಾವ್, ರವಿ, ಹುಲುಕೂರು ಗ್ರಾಮದ ವಾಸಿ ಗೋಪಾಲ್ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಗೌನಿಪಲ್ಲಿ ವಾಸಿಗಳಾದ ರಿಯಾಜ್ ಪಾಷ, ವಿ.ರವಿಕುಮಾರ್‍, ಎಂ.ಎಸ್.ಮುನಿರಾಜು ಲಕ್ಷ್ಮಿಪುರ ಗ್ರಾಮದ ವಾಸಿ ಜಮ್ಮು @ ಜಮೀರ್‍ ಪಾಷ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಮಣೆಗಾನಹಳ್ಳಿ ಗ್ರಾಮದ ವಾಸಿ ರಾಮಕೃಷ್ಣಾರೆಡ್ಡಿ(೪೫), ಕನಿಗಾನಹಳ್ಳಿ ಗ್ರಾಮದ ವಾಸಿಗಳಾದ ನರಸಿಂಹಪ್ಪ (೨೪), ಶಿವಾರೆಡ್ಡಿ (೩೦) ನರಸಿಂಹಪ್ಪ (೨೪) ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಯನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಮಾಲೂರು ತಾಲೂಕು ದೊಡ್ಡಕಲ್ಲಹಳ್ಳಿ ಗ್ರಾಮದ ವಾಸಿ ಮುನಿಸ್ವಾಮಿ (೩೫) ಎಂಬ ರೌಡಿ ಆಸಾಮಿಯನ್ನು ಬಂಧಿಸಲಾಗಿರುತ್ತದೆ.  ಮುನಿಸ್ವಾಮಿ ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಈತನ ವಿರುದ್ದ ಪ್ರಕರಣ ದಾಖಲಾಗಿರುತ್ತದೆ,  ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೦೫

-ಸ್ಥಳ ದಂಡ ಮೊತ್ತ: ರೂ. ೫೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಏಪ್ರಿಲ್ ೦೮

April 29, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೪-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ವೇಮಗಲ್ ಗ್ರಾಮದ ವಾಸಿ ವಿ.ಎಲ್.ಅಮರ್‍ ಎಂಬುವರ ಸರ್ವೆ ನಂ. ೧೧೨/೧ ರ ಕೊಳವೆಬಾವಿಗೆ ಅಳವಡಿಸಿದ್ದ ಪ್ಯಾನಲ್ ಬೋರ್ಡ್ ಕಳುವಾಗಿರುತ್ತದೆ.  ದಿನಾಂಕ ೧೯-೦೪-೨೦೦೮ ರಂದು ಜಮೀನೊಳಗೆ ನುಗ್ಗಿದ ಯಾರೋ ಕಳ್ಳರು ಪ್ಯಾನಲ್ ಬೋರ್ಡನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. 

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ 

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೦೪-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಯನಾದಹಳ್ಳಿ ಗ್ರಾಮದ ವಾಸಿ ಸಂಜೀವಗೌಡ ಎಂಬುವರು ತಮ್ಮ ಬಜಾಜ್ ಪಲ್ಸರ್‍ ಸಂಖ್ಯೆ ಕೆಎ-೦೭-ಕ್ಯೂ-೧೮೫೯ ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮದ ವಾಸಿ ಯಶೋದಮ್ಮ ಎಂಬುವರೊಡನೆ ಕೋಲಾರ-ಚಿಕ್ಕಬಳ್ಳಾಪುರ ರಸ್ತೆಯ ಈಲಂ ಗ್ರಾಮದ ಬಳಿ ಬರುತ್ತಿದ್ದರು.  ಆ ಸಮಯದಲ್ಲಿ ಸಂಜೀವಗೌಡ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಹಂಪ್ಸ್ ಮೇಲೆ ಹತ್ತಿಸಿದ್ದು ವಾಹನದ ಹಿಂಬಾಗದಲ್ಲಿ ಕುಳಿತಿದ್ದ ಯಶೋದಮ್ಮ ರವರು ಕೆಳಗೆ ಬಿದ್ದಿರುತ್ತಾರೆ.  ಇದರ ಪರಿಣಾಮ ಯಶೋದಮ್ಮ ರವರ ತಲೆಗೆ ಗಾಯಗಳಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾರೆ.

-ಸಾಧಾರಣ: ೦೩

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೦೪-೨೦೦೮ ರಂದು ೧೭೨೦ ಗಂಟೆ ಸಮಯದಲ್ಲಿ ಕೋಲಾರ ನಗರ ವಾಸಿ ಸಿ.ಬಿ.ಜಯರಾಮ್ ಎಂಬುವರು ತಮ್ಮ ಮಾರುತಿ ಕಾರ್‍ ಸಂಖ್ಯೆ ಕೆಎ-೦೭-ಎನ್-೭೩೩ ರಲ್ಲಿ ಜನ್ನಘಟ್ಟ ಗ್ರಾಮದಿಂದ ಕೋಲಾರಕ್ಕೆ ಬರುವ ಸಲುವಾಗಿ ಕೋಡಿಕಣ್ಣೂರು ಗೇಟ್ ಬಳಿ ಬರುತ್ತಿದ್ದರು.  ಆ ಸಮಯದಲ್ಲಿ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಬಲಬದಿಯಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಜಯರಾಮ್ ರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೦೩-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿಗಳಾದ ರಾಜಶೇಖರ್‍ ಮತ್ತು ಯಶೋದಾದೇವಿ ಎಂಬುವರು ತಮ್ಮ ಸ್ಕೂಟರ್‍ ಸಂಖ್ಯೆ ಸಿಕೆಡ್ಬ್ಲ್ಯೂ ೪೫೫೮ ರಲ್ಲಿ ಎನ್-ಹೆಚ್ ೪ ರಸ್ತೆಯ ಚಲುವನಹಳ್ಳಿ ಪಾರಿಸ್ಟ್ ಬಳಿ ಬರುತ್ತಿದ್ದರು.  ಆ ಸಮಯದಲ್ಲಿ ಹಿಂಬಾಘದಿಂದ ಬಂದ ೪೦೭ ಟೆಂಪೋವಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಸ್ಕೂಟರ್‍ ಸವಾರರಾದ ರಾಜಶೇಖರ್‍ ಮತ್ತು ಯಶೋದಾದೇವಿರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ಹಾಸ್ ಮಟ್  ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೨-೦೪-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಜಿಂಗಮಶಿಗೇನಹಳ್ಳಿ ಗ್ರಾಮದ ವಾಸಿ ನಾರಾಯಣಪ್ಪ ಎಂಬುವರು ಚಲ್ಡಿಗಾಲಹಳ್ಳಿ ಗ್ರಾಮದ ಬಳಿ ಬರುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-೯೪೫೪ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ನಾರಾಯಣಮ್ಮ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ವೇಮಗಲ್ ಪೊಲೀಸ್ ಠಾಣೆಯ ಮುಂದೆ ಕೃತ್ಯ ಸಂಭವಿಸಿರುತ್ತದೆ.  ವೇಮಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಧ ಕೇಬಲ್ ವೈರ್‍ ಕಳವು ಪ್ರಕರಣಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಮಂಜುನಾಥ್, ನಾರಾಯಣಮೂರ್ತಿ ರವರ ಮುಂದಾಳತ್ವದಲ್ಲಿ  ಸುಮಾರು ೧೨೦ ಜನರು ಠಾಣೆಯ ಮುಂದೆ ಅನಧಕೃತವಾಗಿ ಗುಂಪು ಸೇರಿ ರಸ್ತೆ ತಡೆ ನಡೆಸಿ ಸಾರ್ವಜನಿಕ ಸಂಚಾರಕ್ಕ ಅಡಚಣೆ ಮಾಡಿರುತ್ತಾರೆ. 

ಹಲ್ಲೆ: ೦೨

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ನಗರ ಬೋವಿಕಾಲೋನಿ ಯಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೦-೦೪-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಮುನೇಶ್ವರ ನಗರ ವಾಸಿಗಳಾದ ರಾಮಚಂದ್ರಪ್ಪ ಮತ್ತು ನವೀನ್ ಎಂಬುವರು ಬೋವಿನಗರದ ವಾಸಿ ವೆಂಕಟೇಶ್ (೪೮) ಎಂಬುವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇಟ್ಟಿಗೆಯಿಂದ ಹೊಡೆದು ಗಾಯಪಡಿಸಿರುತ್ತಾರೆ. 

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಮುಳ್ಳಹಳ್ಳಿ ಗ್ರಾಮದ ಕೆರೆಯ ಸಮೀಪ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೮-೦೪-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಮುಳ್ಳಹಳ್ಳಿ ಗ್ರಾಮದ ವಾಸಿ ವೆಂಕಟೇಶರೆಡ್ಡಿ ಎಂಬುವರ ಮೇಲೆ ಅದೇ ಗ್ರಾಮದ ವಾಸಿಯಾದ ಮಂಜುನಾಥರೆಡ್ಡಿ ಎಂಬುವರು ಜಗಳ ತೆಗೆದು ಏಕಾಏಕಿ ಚಾಕುವಿನಿಂದ ಬೆನ್ನಿಗೆ ಹೊಡೆದು ಗಾಯಪಡಿಸಿರುತ್ತಾರೆ.  ಪರಸ್ಪರರ ನಡುವೆ ಇದ್ದ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ಹೈದರೀನಗರದ ವಾಸಿ ಗುಲ್ ಜಾರ್‍ ಎಂಬುವರ ಮಗನಾದ ಇಮ್ರಾನ್ ದಸ್ತಗೀರ್‍ (೨೪) ಎಂಬರು ಮೃತಪಟ್ಟವರು. ದಿನಾಂಕ ೨೪-೦೪-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಮೃತ ಇಮ್ರಾನ್ ದಸ್ತಗೀರ್‍ ರವರು ವಿದ್ಯುತ್ ಇಲ್ಲದ ಕಾರಣ ತನ್ನ ಮನೆಯಲ್ಲಿ ಸೀಮೆಎಣ್ಣೆ ದೀಪ ಹತ್ತಿಸುವಾಗ ಆಕಸ್ಮಿಕವಾಗಿ ದೀಪ ಮೈಮೇಲೆ ಬಿದ್ದು ಸುಟ್ಟಗಾಯಗಳಾಗಿರುತ್ತದೆ.  ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೨೮-೦೪-೨೦೦೮ ರಂದು ೧೩೧೫ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ೨೦

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಮುಳಬಾಗಿಲು ಟೌನ್ ವಾಸಿ ನಾಗೇಶ್, ಎಂಬ ರೌಡಿ ಆಸಾಮಿಯನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ನಂಗಲಿ ಗ್ರಾಮದ ವಾಸಿಗಳಾದ ಎನ್.ವಿ.ಸುಬ್ರಮಣಿ, ಜಿ.ಚಂದ್ರಶೇಖರ್‍ @ ಲಾಯರ್‍ ಚಂದ್ರಶೇಖರ್‍, ಎಲ್.ನಾರಾಯಣಸ್ವಾಮಿ, ವಿಶ್ವನಾಥ @ ವಿಶ್ವನಾಥರೆಡ್ಡಿ, ಸುಬ್ರಮಣಿ @ ಮಣಿ, ಎಸ್.ಗೋಪಾಲಕೃಷ್ಣ @ ಗೋಪಾಲ್ @ ಬಿಜೆಪಿ ಗೋಪಾಲ್, ರಿಯಾಜ್ ಬೇಗ್, ಅಹ್ಮದ್ ಬೇಗ್, ಚಿನ್ನಹಳ್ಳಿ ಗ್ರಾಮದ ವಾಸಿ ಸಿ.ಗೋಪಾಲ್ @ ಚಿನ್ನಹಳ್ಳಿ ಗೋಪಾಲ್, ಮಾಕಲಹಳ್ಳಿ ಗ್ರಾಮದ ವಾಸಿ ಎಲ್.ಚಂದ್ರಪ್ಪ @ ಚಂದ್ರ, ಮಲ್ಲೇಕುಪ್ಪ ಗ್ರಾಮದ ವಾಸಿ ಎಂ.ವಿ.ಸುಬ್ರಮಣಿ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಕನಿಗಾನಹಳ್ಳಿ ಗ್ರಾಮದ ವಾಸಿ ರವಣಪ್ಪ (೩೦), ದಾಸರತಿಮ್ಮನಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ಕೊರ್‍ನಹಳ್ಳಿ ಗ್ರಾಮದ ವಾಸಿ ಆಂಪ್ಪ @ ಕೊರ್‍ನಹಳ್ಳಿ ಆಂಜಿ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಕೋಲಾರ ನಗರ ಕುರುಬರಪೇಟೆ ವಾಸಿಗಳಾಧ ರಮೇಶ (೪೩), ನಾರಾಯಣಸ್ವಾಮಿ (೪೦), ಕಠಾರಿಪಾಳ್ಯದ ವಾಸಿ ವೇಣುಗೋಪಾಲ್ (೩೫), ಗೌರಿಪೇಟೆ ವಾಸಿಗಳಾದ ನೌಷಾದ್ ಪಾಷ ಮತ್ತು ಅಬೀಬ್ ಪಾಷ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೫

-ಸ್ಥಳ ದಂಡ ಮೊತ್ತ: ರೂ. ೧೫೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಏಪ್ರಿಲ್ ೦೮

April 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨8-೦೪-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ನೆರ್‍ನಹಳ್ಳಿ ಗ್ರಾಮದ ವಾಸಿಗಳಾದ ಮಂಜುನಾಥ (೨೮)ತಂದೆ ಲೇಟ್ ಗುರುವಣ್ಣ ಹಾಗೂ ಮುತ್ತಕದಹಳ್ಳಿ ಗ್ರಾಮದ ವಾಸಿ  ಮಂಜುನಾಥ (೧೯) ತಂದೆ ಶ್ರೀರಾಮಪ್ಪ ಎಂಬುವರು ನೆರ್‍ನಹಳ್ಳಿ ಗ್ರಾಮದ ವಾಸಿ ಶಿವಣ್ಣ ಎಂಬುವರನ್ನು ಕೊಲೆಗೈದಿರುತ್ತಾರೆ. ಶಿವಣ್ಣ ಆರೋಪಿ ಮಂಜುನಾಥನ ಅಣ್ಣನಾಗಿದ್ದು ದಿನಾಂಕ ೦೮-೦೪-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಇವರನ್ನು ತಮ್ಮೊಡನೆ ಕರೆದುಕೊಂಡ ಹೋದ ಆರೋಪಿಗಳು ನಾಚೇನಳ್ಳಿ ಅರಣ್ಯಪ್ರದೇಶದ ರಸ್ತೆಯಲ್ಲಿ ಮಚ್ಚಿನಿಂದ ಮತ್ತು ದೊಣ್ಣೆಯಿಂದ ಹೊಡೆದು ಕೊಲೆಗೈದಿರುತ್ತಾರೆ.  ದಿನಾಂಕ ೨೭-೦೪-೨೦೦೮ ರಂದು ೧೭೧೫ ಗಂಟೆ ಸಮಯದಲ್ಲಿ ಆರೋಪಿಗಳು ಮುಳಬಾಗಿಲು ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಕೃತ್ಯ ಬಯಲಿಗೆ ಬಂದಿರುತ್ತದೆ.  ಕೊಲೆಗೀಡಾದ ಶಿವಣ್ಣ ಮಂಜುನಾಥನ ಹೆಂಡತಿ ಲಕ್ಷ್ಮಿದೇವಿ ಎಂಬಾಕೆಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುತ್ತಾರೆ.  ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ವೇಮಗಲ್ ಹೋಬಳಿ ರಘುಪತಿ ಅಗ್ರಹಾರದ ಮುನಿಕೃಷ್ಣಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೮-೦೪-೨೦೦೮ ರಂದು ೦೫೦೦ ಗಂಟೆ ಸಮಯದಲ್ಲಿ ಆರೋಪಿಗಳಾದ ಕೋಲಾರ ತಾಲೂಕು ಚಲಗಾನಹಳ್ಳಿ ಗ್ರಾಮದ ವಾಸಿ ರಾಜೇಶ, ಕ್ಯಾಲನೂರು ವಾಸಿ ಅಹಮದ್ ಮತ್ತು ಕಡಘಟ್ಟೂರು ಗ್ರಾಮದ ವಾಸಿ ಮುನಿರಾಜು ಎಂಬುವರು ಮುನಿಕೃಷ್ಣಪ್ಪ ರವರ ಜಮೀನಿನಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಕೇಬಲ್ ವೈರನ್ನು ಕಳವು ಮಾಡಿರುತ್ತಾರೆ.  ಸ್ಥಳಕ್ಕೆ ಆಗಮಿಸಿದ ಮುನಿಕೃಷ್ಣಪ್ಪ ರವರು ಕೃತ್ಯವನ್ನು ಕಂಡಿದ್ದು ಓಡಿಹೋಗುತ್ತಿದ್ದ ಆರೋಪಿಗಳನ್ನು ಹಿಡಿದುಕೊಂಡಿರುತ್ತಾರೆ.  ಆರೋಪಿಗಳ ಪೈಕಿ ಮುನಿರಾಜು ಎಂಬುವರು ಪರಾರಿಯಾಗಿರುತ್ತಾರೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ 

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೭-೦೩-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಮಾಲೂರು ಹಾರೋಹಳ್ಳಿ ಗ್ರಾಮದ ವಾಸಿ ಕಾಂತರಾಜ್ ಎಂಬುವರು ಮಾಲೂರು-ಹೊಸೂರು ರಸ್ತೆಯ ಹುಲಿಮಂಗಲ ಹೊಸಕೋಟೆ ಗೇಟ್ ಬಳಿ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು.  ಆ ಸಮಯದಲ್ಲಿ ಲಕ್ಕೂರು ಗೇಟ್ ಕಡೆಯಿಂದ ಬಂದ ಮಿನಿಬಸ್ ಸಂಖ್ಯೆ ಕೆಎ-೪೦-೪೫೩ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾಂತರಾಜ್ ರವರ ಕಾಲಿನ ಮೇಲೆ ಚಕ್ರ ಹಿರಿದಿದ್ದು ತಲೆಗೆ ತೀವ್ರವಾದ ಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಜಿಂಬಾಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ಜಿಂಬಾಪುರ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಅಪಹರಣಕ್ಕೀಡಾಗಿರುತ್ತಾಳೆ.  ದಿನಾಂಕ ೨೪-೦೪-೨೦೦೭ ರಂದು ಸಂಜೆ ಚಿಕ್ಕಬಳ್ಳಾಪುರ ಜಿಲ್ಲೆಯ ಬೈರಬಂಡ ಗ್ರಾಮದ ವಾಸಿ ಗಂಗಾಧರ ಎಂಬುವನು ಬಾಲಕಿಯನ್ನು ಅಪಹರಸಿರುವುದಾಗಿ ಅಪಹರಣಕ್ಕೊಳಗಾದ ಬಾಲಕಿಯ ತಾಯಿ ತನ್ನ ದೂರಿನಲ್ಲಿ ತಿಳಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ೧೩

ನಂಗಲಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ನಂಗಲಿ ಗ್ರಾಮದ ವಾಸಿ ಇರ್ಷಾದ್ ಬೇಗ್ (೩೮), ಇಲಿಯಾಜ್ ಬೇಗ್ @ ಇಲಿಯಾಜ್, ಅಲ್ತಾಫ್ (೩೦), ಮತ್ತು ಆನಂದ (೩೮) ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ಟೌನ್ ವಾಸಿ ಶ್ರೀನಿವಾಸರೆಡ್ಡಿ @ ರೇಲಂಗಿ, ಅರಿಕೆರೆ ಗ್ರಾಮದ ವಾಸಿ ಎ.ಎನ್.ನಾರಾಯಣಸ್ವಾಮಿ, ರವಿಚಂದ್ರ (೩೩), ಅರಿಕೆರೆ ಗ್ರಾಮದ ವಾಸಿಗಳಾದ ಗವಿಯಪ್ಪ, ವೆಂಕಟರಾಜು, ಶ್ರೀನಿವಾಸಪುರ ತಾಲೂಕು ಬೈಯಪಲ್ಲಿ ಗ್ರಾಮದ ವಾಸಿ ಗಂಗಾಧರ (೪೦), ಕನಿಗಾನಹಳ್ಳಿ ಗ್ರಾಮದ ವಾಸಿಗಳಾದ ತಿಪ್ಪಣ್ಣ, ಗೋವಿಂದರೆಡ್ಡಿ, ಎನ್,ಬಾಬು, ಮುತ್ತಕಪಲ್ಲಿ ಗ್ರಾಮದ ವಾಸಿ ಜಬಿವುಲ್ಲಾ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೧

-ಸ್ಥಳ ದಂಡ ಮೊತ್ತ:  ರೂ. ೨೧೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಏಪ್ರಿಲ್ ೦೮

April 27, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೪-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ 

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ಮಾಲೂರು ತಾಲೂಕು ಚಿಕ್ಕತಿರುಪತಿ ಗ್ರಾಮದ ಸರ್ಜಾಪುರ ರಸ್ತೆಯ ಬಳಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೭-೦೪-೨೦೦೮ ರಂದು ಬೆಳಗಿನ ಜಾವ ಯಾವುದೋ ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆದು ಸ್ಳಳದಲ್ಲಿ ನಿಲ್ಲಿಸದೇ ಹೊರಟುಹೋಗಿರುತ್ತಾನೆ.  ಇದರ ಪರಿಣಾಮ ಅಪರಿಚಿತ ಮಹಿಳೆಯ ತಲೆಗೆ ತೀವ್ರವಾದ ಗಾಯಗಳುಂಟಾಗಿದ್ದು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ.

-ಸಾಧಾರಣ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೦೪-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ಮಾರನಹಳ್ಳಿ ಗ್ರಾಮದ ವಾಸಿ ಪ್ರಭಾಕರ (೨೫) ಎಂಬುವರು ತಮ್ಮ ಗ್ರಾಮದ ವಾಸಿ ನಾಗರಾಜು ಎಂಬುವರೊಡನೆ ಹೀರೊಹೋಂಡಾ ಸ್ಪ್ಲೆಂಡರ್‍ ಸಂಖ್ಯೆ ಕೆಎ-೦೩-ಇಟಿ-೭೦೪೮ ವಾಹನದಲ್ಲಿ ಟೇಕಲ್ ನಿಂದ ಮಾಲೂರಿಗೆ ಹೋಗುವ ಸಲುವಾಗಿ ಬೈರತ್ನಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಲಾರಿ ಸಂಖ್ಯೆ ಕೆಎ-೦೮-೭೮೬೮ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಪರಿಣಾಮ ಲಾರಿಯಲ್ಲಿದ್ದ ನೀಲಗಿರಿ ಮರದ ತುಂಡುಗಳು ಪ್ರಭಾಕರ ರವರು ಹೋಗುತ್ತಿದ್ದ ದ್ವಿಚಕ್ರವಾಹನದ ಮೇಲೆ ಬಿದ್ದಿರುತ್ತದೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ಟೌನ್ ನೂಕಲಬಂಡೆಯಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೦-೦೪-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ನೂಕಲುಬಂಡೆಯ ವಾಸಿ ಅಜ್ಗರಿ ಎಂಬುವರ ಮೇಲೆ ಅಲ್ಲಿಯ ವಾಸಿಗಳೇ  ಆದ ಕುಷ್ಠರ್‍, ಶಕೀಲಾ, ನೂರ್‍, ಅಕ್ತರ್‍, ಪಜಲ್ ಮತ್ತು ಜಮೀರ್‍ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ.  ಅಜ್ಗರಿ ರವರ ಮನೆಯಲ್ಲಿದ್ದ ಪಾತ್ರೆಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಈ ಹಿನ್ನೆಲೆಯಲ್ಲಿ ಕೃತ್ಯ ಸಂಭವಿಸಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ೧೪

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಗೌನಿಪಲ್ಲಿ ವಾಸಿಗಳಾದ ಎಂ.ಶ್ರೀನಿವಾಸ @ ರೌಡಿಸೀನಾ, ಜಿ.ಆರ್‍.ಸತ್ಯನಾರಾಯಣ, ಮುನಿರಾಜು, ಕೆ.ರಾಜೇಂದ್ರಪ್ರಸಾದ್, ಎಗುವಪಾಪಿಶೆಟ್ಟಿಹಳ್ಳಿ ಗ್ರಾಮದ ವಾಸಿ ವೈ.ರಾಮಚಂದ್ರರೆಡ್ಡಿ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಮಾಲೂರು ಪುರದ ವಾಸಿಗಳಾದ ಶ್ರೀನಿವಾಸ @ ಬಡಗಿ (೩೭) ಮತ್ತು ಜಿ.ಮಹೇಶ್ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ಟೌನ್ ವಾಸಿಗಳಾದ ಮಹಮದ್ ಅಲಿ (೪೦), ಸತ್ಯನಾರಾಯಣರಾವ್ @ ಸತ್ತಿ,  ಕನಿಗಾನಹಳ್ಳಿ ಗ್ರಾಮದ ವಾಸಿಗಳಾದ ರಾಮಾಂಜನೇಯರೆಡ್ಡಿ (೩೫) ಮತ್ತು ರೆಡ್ಡಪ್ಪ (೪೨), ಮುತ್ತಕಪಲ್ಲಿ ಗ್ರಾಮದ ವಾಸಿಗಳಾದ ಅಮೀರ್‍ ಜಾನ್, ಪ್ರವೀಣ್ ಕುಮಾರ್‍, ಷೇಖ್ ಮಹಬೂಬ್ ಸಾಬ್ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೫

-ಸ್ಥಳ ದಂಡ ಮೊತ್ತ:  ರೂ. ೧೫೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಏಪ್ರಿಲ್ ೦೮

April 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೪-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ 

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ-ವೇಮಗಲ್ ರಸ್ತೆಯ ಗರುಡನಹಳ್ಳಿ ಗ್ರಾಮದ ಗೇಟ್ ಸಮೀಪ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೪-೨೦೦೮ ರಂದು ೦೬೪೫ ಗಂಟೆ ಸಮಯದಲ್ಲಿ ಸುಮಾರು ೨೨ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೇಲೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿ ಸ್ಥಳದಲ್ಲಿಯೇ ಅಸುನೀಗಿರುತ್ತಾನೆ.  

-ಸಾಧಾರಣ: ೦೩

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೪-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿ ಕೆ.ಬಿ.ಮಂಜುನಾಥ ಎಂಬುವರು ತಮ್ಮ ಸಂಬಂಧಿಕರೊಡನೆ ಕಾರ್‍ ಸಂಖ್ಯೆ ಕೆಎ-೦೫-ಎಂಡಿ-೯೯೩೩ ರಲ್ಲಿ ಕೋಲಾರ-ಬೆಂಗಳೂರು ಎನ್.ಹೆಚ್ ೪ ರಸ್ತೆಯ ಕೊಂಡರಾಜನಹಳ್ಳಿ ಗ್ರಾಮದ ಸಮೀಪ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟಾಟಾ ಇಂಡಿಕಾ ಕಾರ್‍ ಸಂಖ್ಯೆ ಕೆಎ-೦೨-ಡಿ-೬೮೬೦ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಎರಡೂ ಕಾರಿನಲ್ಲಿದ್ದವರಿಗೆ ಗಾಯಗಳುಂಟಾಗಿರುತ್ತದೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೪-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ  ಬೆಂಗಳೂರು ದಾಸರಹಳ್ಳಿ ವಾಸಿಯಾದ ಬಿ.ಕಾರ್ತಿಕೇಯನ್ ಹಾಗೂ ಇತರರು ಮಾರುತಿ ಸ್ವಿಫ್ಟ್ ಕಾರ್‍ ಸಂಖ್ಯೆ ಯು.ಪಿ-೧೪-ಎ.ಕೆ-೬೩೩೪ ರಲ್ಲಿ ಕೋಲಾರ ಹೊರವಲಯದ ಎನ್.ಹೆಚ್-೦೪ ರಸ್ತೆಯಲ್ಲಿ ಟಮಕ ಜಿಗ್ ಜಾಗ್ ಬಳಿ ಹೋಗುತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟ್ರಾಕ್ಟರ್‍ ಸಂಖ್ಯೆ ಕೆಎ-೦೭-ಟಿ-೫೭೬೪ ರ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಮಾರುತಿ ಸ್ವಿಫ್ಟ್ ಕಾರ್‍ ಜಖಂಗೊಂಡಿದ್ದು ಕಾರಿನಲ್ಲಿದ್ದ ರಾದಾಬಾಯಿ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೪-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹುಲ್ಲಕಲ್ಲು ಗ್ರಾಮದ ವಾಸಿ ಎಸ್.ಬಿ.ಮಂಜುನಾಥ್ (೨೦) ಎಂಬುವರು ಕಾಲೇಜಿಗೆ ಹೋಗುವ ಸಲುವಾಗಿ ತಮ್ಮ ಸೈಕಲ್ ನಲ್ಲಿ ಹುಲ್ಲಕಲ್ಲು ಗ್ರಾಮದ ರಸ್ತೆಯಲ್ಲಿ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟಿ..ವಿ.ಎಸ್ ಹೆವಿಡ್ಯೂಟಿ ಸಂಖ್ಯೆ ಕೆಎ-೦೭-ಕೆ-೮೯೨೯ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಎಸ್.ಬಿ.ಮಂಜುನಾಥ್ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಗಟ್ಟಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೪-೦೪-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ಗಟ್ಟಹಳ್ಳಿ ಗ್ರಾಮದ ವಾಸಿ ಬೈರಾರೆಡ್ಡಿ ಎಂಬುವರ ಮೇಲೆ ಅದೇ ಗ್ರಾಮದ ವಾಸಿ ಶ್ರೀರಾಮರೆಡ್ಡಿ ಎಂಬುವರು ಜಗಳ ತೆಗೆದು ಅಕ್ರಮವಾಗಿ ತಡೆದು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.  ನೀರು ಸರಬರಾಜು ಮಾಡುವ ವಿಷಯದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.  

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ೧೫

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಬೈಯಪಲ್ಲಿ ಗ್ರಾಮದ ವಾಸಿಗಳಾದ ಯರಪ್ಪರೆಡ್ಡಿ ಹಾಗೂ ವೆಂಕಟರೆಡ್ಡಿ, ನಾಗರೆಡ್ಡಿಗಾರಿಪಲ್ಲಿ ಗ್ರಾಮದ ವಾಸಿ ಮಧು ಮತ್ತು ಬತ್ತಲಗುಟ್ಟಪಲ್ಲಿ ಗ್ರಾಮದ ವಾಸಿ ರಮೇಶ  ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಮುಳಬಾಗಿಲು ಪುರ ಅಂಬೇಡ್ಕರ್‍ ನಗರದ ವಾಸಿ ಲಕ್ಷ್ಮಿನಾರಾಯಣ ಎಂಬ ರೌಡಿ ಆಸಾಮಿಯನ್ನು ಬಂಧಿಸಲಾಗಿರುತ್ತದೆ.  ಲಕ್ಷ್ಮಿನಾರಾಯಣ ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗವನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ದೊಂಬರಪಲ್ಲಿ ಗ್ರಾಮದ ವಾಸಿ ರಮೇಶ ಹಾಗೂ ಬಗಲಘಟ್ಟ  ಗ್ರಾಮದ ವಾಸಿ ಶ್ರೀನಿವಾಸರೆಡ್ಡಿ  ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ಟೌನ್ ವಾಸಿ ಬಿ.ಎಂ.ಪ್ರಕಾಶ, ಶ್ರೀನಿವಾಸಪುರ ತಾಲೂಕು ಮಲಗಾನಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ (೫೦), ದೊಡಮಲದೊಡ್ಡಿ ಗ್ರಾಮದ ವಾಸಿ ವೆಂಕಟರಮಣ (೩೭), ಅತ್ತಿಕುಂಟೆ ಗ್ರಾಮದ ವಾಸಿ ಕೆ.ರಾಜಶೇಖರ ರೆಡ್ಡಿ (೩೮), ಪಾಯಮುತ್ತಕಪಲ್ಲಿ ಗ್ರಾಮದ ವಾಸಿ ಗವಿರೆಡ್ಡಿ (೩೫), ಮುತ್ತಕಪಲ್ಲಿ ಗ್ರಾಮದ ವಾಸಿ ಮುನೇಗೌಡ (೩೮)   ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಮಾಲೂರು ಪುರದ ವಾಸಿಗಳಾದ ಶ್ರೀನಿವಾಸ.ಕೆ @ ಮಾಯಸಂದ್ರ ಸೀನ ಹಾಗೂ ಬಾಬುರೆಡ್ಡಿ @ ಬಾಬು, ಮಾಲುರು ತಾಲೂಕು ಕುಂದೇನಹಳ್ಳಿ ಗ್ರಾಮದ ವಾಸಿ ಮಾರುತಿಪ್ರಕಾಶ್   ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೯

-ಸ್ಥಳ ದಂಡ ಮೊತ್ತ:  ರೂ. ೨೧೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಕೋಲಾರ ಜಿಲ್ಲೆಯ ನೂತನ ಎಸ್.ಪಿ ಯಾಗಿ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್ ಅಧಿಕಾರ ಸ್ವೀಕಾರ

April 26, 2008

ಕೋಲಾರ ಜಿಲ್ಲೆಯ ನೂತನ ಆರಕ್ಷಕ ಅಧೀಕ್ಷಕರಾಗಿ ಮಾನ್ಯ ಶ್ರೀ ಸೀಮಾಂತ್ ಕುಮಾರ್‍ ಸಿಂಗ್, .ಪಿ.ಎಸ್ ರವರು ಅಧಿಕಾರ ಸ್ವೀಕಾರ ಮಾಡಿಕೊಂಡಿರುತ್ತಾರೆ. ಮಾನ್ಯ ಶ್ರೀ ಸೀಮಾಂತ್ ಕುಮಾರ್‍ ಸಿಂಗ್, .ಪಿ.ಎಸ್ ರವರು ಹಿಂದೆ ಬೆಂಗಳೂರು ಪೂರ್ವವಲಯದ ಸಂಚಾರಿ ಡಿ.ಸಿ.ಪಿ ರವರಾಗಿ ಕರ್ತವ್ಯ ನಿರ್ವಹಿಸಿದ್ದು ದಿನಾಂಕ ೨೬-೦೪-೨೦೦೮ ರಂದು ಬೆಳಗ್ಗೆ ಕೋಲಾರ ಜಿಲ್ಲೆಯ ಹೆಚ್ಚುವರಿ ಆರಕ್ಷಕ ಅಧೀಕ್ಷಕರಾದ ಶ್ರೀ ಯಲ್ಲಪ್ಪ ರವರಿಂದ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಏಪ್ರಿಲ್ ೦೮

April 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೪-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಹೊಗರಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ಶ್ರೀನಿವಾಸಪ್ಪ ಮತ್ತು ಶಾಂತಮ್ಮ ಎಂಬುವರು ಪತಿ ಪತ್ನಿಯರಾಗಿದ್ದು ಹೊಗರಿ ಗ್ರಾಮದಲ್ಲಿ ವಾಸವಾಗಿರುತ್ತಾರೆ.  ಶ್ರೀನಿವಾಸಪ್ಪ ತನ್ನ ಹೆಂಡತಿಗೆ ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದು ದಿನಾಂಕ ೨೩-೦೪-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪ್ಪ ರೂ. ೫೦,೦೦೦/ ವರದಕ್ಷಿಣೆ ತರುವಂತೆ ತನ್ನ ಹೆಂಡತಿಗೆ ಒತ್ತಾಯ ಮಾಡಿ ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾನೆ. ಕೃತ್ಯವನ್ನು ಕಂಡ ಎದುರುಮನೆಯ ವಾಸಿ ಆನಂದಪ್ಪ (೩೮) ಎಂಬುವರು ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ,

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತಿಕ್ರಮ ಪ್ರವೇಶ ಮತ್ತು ಅತ್ಯಾಚಾರ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಮಡೇರಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೫-೦೪-೨೦೦೮ ರಂದು ೦೧೦೦ ಗಂಟೆ ಸಮಯದಲ್ಲಿ ಮಡೇರಹಳ್ಳಿ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬುವನು ತಮ್ಮ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದ ಮಹಿಳೆ ಹಾಗೂ ಆಕೆಯ ಮಕ್ಕಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿರುತ್ತಾನೆ.  

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೦-೦೪-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಪೂಜಾರಹಳ್ಳಿ ಗ್ರಾಮದ ವಾಸಿ ಪಾಪಿರೆಡ್ಡಿ ಎಂಬುವರು ಕೆಎ-೫೧-ಇ-೮೪೭ ದ್ವಿಚಕ್ರವಾಹನದಲ್ಲಿ ಸ್ವಂತ ಕೆಲಸದ ನಿಮಿತ್ತ ಗುಡಿಪಲ್ಲಿ ಗ್ರಾಮದಿಂದ ತಮ್ಮ ಗ್ರಾಮಕ್ಕೆ ಬರುವ ಸಲುವಾಗಿ ಲಕ್ಷ್ಮಿಪುರ ಗ್ರಾಮದ ಬಳಿ ಬರುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಗುಡ್ಸ್ ಆಟೋ ಸಂಖ್ಯೆ ಕೆಎ-೦೭-೬೨೯೦ ರ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಪಾಪಿರೆಡ್ಡಿ ರವರಿಗೆ ಗಾಯಗಳುಂಟಾಗಿರುತ್ತದೆ.  ಆರೋಪಿ ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿರುತ್ತಾನೆ.  

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೪-೨೦೦೮ ರಂದು ೦೭೩೦ ಗಂಟೆ ಸಮಯದಲ್ಲಿ ತಮಿಳುನಾಡು ವೆಲ್ಲೂರು ವಾಸಿ ಕೆ.ಪ್ರಭು ಎಂಬುವರು ತಮ್ಮ ಕುಟುಂಬದೊಡನೆ ಬೆಂಗಳೂರಿಗೆ ಹೋಗುವ ಸಲುವಾಗಿ ತಮ್ಮ ಈಚರ್‍ ಕಾರ್‍ ಸಂಖ್ಯೆ ಕೆಎ-೫೧-ಎಂ-೯೨೪೪ ರಲ್ಲಿ ಎನ್.ಹೆಚ್ ೪ ರಸ್ತೆಯ ಮಲ್ಲನಾಯಕನಹಳ್ಳಿ ಗ್ರಾಮದ ಬಲಿ ಬರುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕಾರ್‍ ಸಂಖ್ಯೆ ಟಿಎನ್-೩೮-ಎಎ-೧೦೦೬ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಎರಡೂ ಕಾರ್‍ ಗಳು ಜಖಂಗೊಂಡಿದ್ದು ಕೆ.ಪ್ರಭು ರವರೂ ಸೇರಿದಂತೆ ಕಾರಿನಲ್ಲಿದ್ದ ಎಲ್ಲರಿಗೂ ಗಾಯಗಳುಂಟಾಗಿರುತ್ತದೆ.  ಗಾಯಾಳುಗಳ ಚಿಕಿತ್ಸೆಗಾಗಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೪-೨೦೦೮ ರಂದು ೦೬೦೦ ಗಂಟೆ ಸಮಯದಲ್ಲಿ ತಮಿಳುನಾಡಿನ ವಾಸಿ ಎಂ.ಕದಿರನ್ ಎಂಬುವರು ಲಾರಿ ಸಂಖ್ಯೆ ಟಿ.ಎನ್-೨೩-ಎ.ವಿ-೩೯೨೯ ರಲ್ಲಿ ಚಾಲನೆ ಮಾಡಿಕೊಂಡು ಬೆಂಗಳೂರಿಗೆ ಹೋಗುವ ಸಲುವಾಗಿ ಮುಳಬಾಗಿಲು-ಕೋಲಾರ ಎನ್.ಹೆಚ್ ೪ ರಸ್ತೆಯ ಉಷಾ ಟೆಲಿಹಾಯಿಸ್ಟ್ ಫ್ಯಾಕ್ಟರಿ ಬಳಿ ಬರುತ್ತಿದ್ದರು.  ಆ ಸಮಯದಲ್ಲಿ ಎಂ.ಕದಿರನ್ ರವರು ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿನ ಮೋರಿಗೆ ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಲಾರಿ ಜಖಂಗೊಂಡಿದ್ದು ಚಾಲಕ ಕದಿರನ್ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಕೋಡಿ ರಾಮಸಂದ್ರ ಗ್ರಾಮದ ವಾಸಿ ನಾರಾಯಣಪ್ಪ ಎಂಬುವರು ಮೃತ ಪಟ್ಟಿರುತ್ತಾರೆ.  ನಾರಾಯಣಪ್ಪರವರಿಗೆ ತೀವ್ರವಾದ ಹೊಟ್ಟೆನೋವು ಬರುತ್ತಿದ್ದು ಅದನ್ನು ತಾಳಲಾರದೇ ವಿಪರೀತವಾದ ಮಧ್ಯ ಸೇವನೆ ಮಾಡಿ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೨೪-೦೪-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಕೊತ್ತಪೇಟೆ ಗ್ರಾಮದ ವಾಸಿ ಜಗದೀಶ್ (೩೨) ಎಂಬುವರು ಕಾಣೆಯಾಗಿರುತ್ತಾರೆ.  ಜಗದೀಶ್ ರವರ ಅರೋಗ್ಯ ಸರಿಇಲ್ಲದೇ ಇದ್ದು ದಿನಾಂಕ ೧೬-೦೪-೨೦೦೮ ರಂದು ನಾಟಿ ಔಷಧಿ ತರುವ ಸಲುವಾಗಿ ತನ್ನ ಮನೆಯಿಂದ ಹೊರಟ ಜಗದೀಶ್ ರವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ಟೌನ್ ಹನುಮನ ಪಾಳ್ಯದ ವಾಸಿ ಕೆ.ನರೇಂದ್ರಕುಮಾರ್‍, ವಲ್ಲಬಾಯಿ ರಸ್ತೆಯ ವಾಸಿಗಳಾದ ಜಗದೀಶ್, ಮತ್ತು ಬಾಬು, ನೆಹರೂ ರಸ್ತೆಯ ವಾಸಿ ಮಂಜುನಾಥ, ಚಲ್ಲಿಗಾನಹಳ್ಳಿ ಗ್ರಾಮದ ವಾಸಿ ಸಿತಪ್ಪ (೪೬)   ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣಗಳು ದಾಖಲಾಗಿರುತ್ತವೆ,  ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಬಗಲಘಟ್ಟ ಗ್ರಾಮದ ವಾಸಿ ಶಂಕರ ಮತ್ತು ದೊಂಬರಪಲ್ಲಿ ಗ್ರಾಮದ ವಾಸಿ ವೆಂಕಟರಮಣ (೩೨)  ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣಗಳು ದಾಖಲಾಗಿರುತ್ತವೆ,  ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಏಪ್ರಿಲ್ ೦೮

April 24, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೪-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಬೆಗ್ಲಿಹೊಸಹಳ್ಳಿ ಗ್ರಾಮದ ಬಳಿ ಕೃತ್ಯ ಸಂಭವಿಸಿದ್ದು ೨ ಎ.ಸಿ.ಎಸ್.ಆರ್‍ ವೈರ್‍ ಕಳುವಾಗಿರುತ್ತದೆ.  ದಿನಾಂಕ ೨೨-೦೪-೨೦೦೮ ರಂದು ಯಾರೋಕಳ್ಳರು ಬೆಗ್ಲಿಹೊಸಹಳ್ಳಿ ಗ್ರಾಮದ ಬಳಿ ವಿದ್ಯುತ್ ಲೈನ್ ಗೆ ಅಳವಡಿಸಿದ್ದ ೨ ಎ.ಸಿ.ಎಸ್.ಆರ್‍ ವೈರ್‍ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಎ.ಸಿ.ಎಸ್.ಆರ್‍ ವೈರ್‍ ಗಳ ಬೆಲೆ ರೂ. ೨೩,೦೦೦/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೩-೦೪-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕುಡುಮನಹಳ್ಳಿ ಗ್ರಾಮದ ವಾಸಿಗಳಾದ ಮುನಿವೆಂಕಟಪ್ಪ ಮತ್ತು ಜಯರಾಮರೆಡ್ಡಿ ಎಂಬುವರು ಹೀರೋಹೋಂಡಾ ಸ್ಪ್ಲೆಂಡರ್‍ ಸಂಖ್ಯೆ ಕೆಎ-೦೭-ಜೆ-೪೫೨೯ ದ್ವಿಚಕ್ರವಾಹನದಲ್ಲಿ ಕೋಲಾರನಗರದ ಮೆಕ್ಕೆ ವೃತ್ತದಬಳಿ ಹೋಗುತ್ತಿದ್ದರು.   ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟ್ರಾಕ್ಟರ್‍ ಸಂಖ್ಯೆ ಕೆಎ-೦೭-ಟಿ-೪೯೫೦ ವಾಹನದ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ವರದೇನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೨-೦೪-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ವರದೇನಹಳ್ಳಿ ಗ್ರಾಮದ ವಾಸಿ ಎಂ.ಈಶ್ವರಪ್ಪ (೩೨) ತಂದೆ ಮುನಿಶಾಮಪ್ಪ ಮತ್ತು ಇವರ ಸಹೋದರ ವೆಂಕಟೇಶಪ್ಪ ತಂದೆ ಮುನಿಶಾಮಪ್ಪ ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾಧ ಈಶ್ವರಪ್ಪ ತಂದೆ ವೆಂಕಟೇಶಪ್ಪ ಮತ್ತು ವೆಂಕಟೇಶಪ್ಪ ತಂದೆ ವೆಂಕಟೇಶಪ್ಪ ಎಂಬುವರು ಗಲಾಟೆ ಮಾಡಿ ಕೈಗಳಿಂದ, ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ. ಆರೋಪಿಗಳು ಗಾಯಾಳುಗಳಿಗೆ ಸೇರಿದ ಹುಣಸೇಮರವೊಂದರಲ್ಲಿ ಪಸಲನ್ನು ಉದುರಿಸುತ್ತಿದ್ದು ಇದನ್ನು ವಿರೋಧಿಸಿದಾಗ ಈ ಕೃತ್ಯ ಎಸಗಿರುತ್ತಾರೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ತಾಲೂಕು ಖದ್ರಿಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೮-೦೪-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಖದ್ರಿಪುರ ಗ್ರಾಮದ ವಾಸಿಯಾದ ಬಾಲಕೃಷ್ಣ ಎಂಬುವರು ಅವರ ತೋಟದ ಮನೆಯಲ್ಲಿ ಮಲಗುವ ಸಲುವಾಗಿ ಹೋಗುತ್ತಿದ್ದರು.  ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಸೋಮಶೇಖರ ಮತ್ತು ಇತರೇ ಮೂರು ಜನರು ಏಕಾಏಕಿಯಾಗಿ ಬಾಲಕೃಷ್ಣರವರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುತ್ತಾರೆ.  ಪರಸ್ಪರ ದ್ವೇ಼ಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೪-೨೦೦೮ ರಂದು ೧೩೨೦ ಗಂಟೆ ಸಮಯದಲ್ಲಿ  ಕೋಲಾರ ವಿಧಾನಸಭಾ ಕ್ಷೇತ್ರದ ಚುನಾವಣೆ ಸ್ಪರ್ದೆಯಲ್ಲಿರುವ ವರ್ತೂರು ಪ್ರಕಾಶ್ ರವರ ಬೆಂಬಲಿಗರು ಕೋಲಾರಮ್ಮ ಬಡಾವಣೆಯ ೩ ನೇ ವಾರ್ಡ್‌ನಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೇ ಸಭೆ ನಡೆಸಲು ಸಿದ್ದತೆ ಮಾಡಿದ್ದು ವಿದ್ಯುತ್ ಕಂಬಗಳಿಗೆ ಪೋಸ್ಟರ್‍ ಗಳನ್ನು ಕಟ್ಟಿ  ಗೋಡೆ ಬರಹಗಳನ್ನು ಬರೆದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಬಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸುಮಾರು ೭೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ಯಿ ಮೃತಪಟ್ಟಿರುತ್ತಾನೆ.  ದಿನಾಂಕ ೨೩-೦೪-೨೦೦೮ ರಂದು ಎಂದಿನಂತೆ ಜಯಮ್ಮ ಕೃಷ್ಣಪ್ಪ ಛತ್ರದ ಮುಂದೆ ಮಲಗಿದ್ದ ಅಪರಿಚಿತ ವ್ಯಕ್ತಿ ಯಾವುದೋ ಖಾಯಿಲೆಯ ಕಾರಣವಾಗಿ ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ಪುರದ ವಾಸಿ ಪುನೋಜಿರಾವ್ ಎಂಬುವರ ಪತ್ನಿ ರುಕ್ಮಿಣಿಬಾಯ್ ಎಂಬುವರು ಕಾಣೆಯಾಗಿರುತ್ತಾರೆ. ದಿನಾಂಕ ೨೦-೦೨-೨೦೦೮ ರಂದು ೦೬೩೦ ಗಂಟೆ ಸಮಯದಲ್ಲಿ ತನ್ನ ತಾಯಿಯ ಮನೆಗೆ ಹೋಗುವ ಸಲುವಾಗಿ ಮನೆಯಿಂದ ಹೊರಟ ರುಕ್ಮಿಣಿಬಾಯ್ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ.  ಶ್ರೀನಿವಾಸಪುರ ಟೌನ್ ವಲ್ಲಬಾಯಿ ರಸ್ತೆಯ ವಾಸಿ ನಾಗರಾಜ (೩೧), ಶ್ರೀನಿವಾಸಪುರ ಟೌನ್ ಜಗಜೀವನ ಪಾಳ್ಯದ ವಾಸಿಗಳಾದ ಸುಧಾಕರ್‍ @ ಗುಂಡ (೨೬) ಮತ್ತು ಕಿರಣ್ ಕುಮಾರ್‍ (೨೮) ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ.  ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣಗಳು ದಾಖಲಾಗಿರುತ್ತವೆ,  ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.  ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೦

-ಸ್ಥಳ ದಂಡ ಮೊತ್ತ:  ೧೦೦೦

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.