ಜೂಜಾಟ ಕೇಂದ್ರದ ಮೇಲೆ ದಾಳಿ: ೧೦ ಜನರ ಬಂಧನ, ೯ ದ್ವಿಚಕ್ರವಾಹನ ಹಾಗೂ ರೂ. ೨೧೦೦/ ವಶ

May 31, 2008

ದಿನಾಂಕ ೩೦-೦೫-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ನಂಗಲಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಶ್ರೀ ನಂಜುಂಡಪ್ಪ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಡನೆ ಮುಳಬಾಗಿಲು ತಾಲೂಕು ಎಂ.ಗೊಲ್ಲಹಳ್ಳಿ ಗ್ರಾಮದ ದೊಡ್ಡಕೆರೆಯ ಬಳಿ ದಾಳಿ ನಡೆಸಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್‍ ಬಾಹರ್‍ ಎಂಬ ಜೂಜಾಟದಲ್ಲಿ ನಿರತರಾಗಿದ್ದು ವಿ.ಮಣಿ ಮತ್ತು ಇತರೇ ೮ ಜನರನ್ನು ಬಂಧಿಸಿರುತ್ತಾರೆ.  ಕಾರ್ಯಾಚರಣೆ ವೇಳೆ ೯ ದ್ವಿಚಕ್ರವಾಹನ ಹಾಗೂ ರೂ, ೨೧೦೦/ ಜೂಜಾಟಕ್ಕೆ ಬಳಸಿದ್ದ ೫೨ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿರುತ್ತಾರೆ.

ಬಂಧಿತ ಆರೋಪಿಗಳ ವಿವರ:

·         ವಿ.ಮಣಿ

·         ಎಲ್.ಆರ್‍.ರೆಡ್ಡಿ

·         ಶಂಕರಾಚಾರಿ

·         ಎನ್.ರಾಮಾಂಜನೇಯುಲು

·         ಸಿ.ಆಂಜಪ್ಪ

·         ರಾಜಾರೆಡ್ಡಿ

·         ಮುರಳಿ

·         ಗಂಗಿರೆಡ್ಡಿ

·         ಸೀನಪ್ಪ

·         ವೇಣುಗೋಪಾಲರೆಡ್ಡಿ ಎಲ್ಲರೂ ಆಂದ್ರಪ್ರದೇಶದ ಪುಂಗನೂರು ಬಳಿಯ ಮತ್ತಿಕೆರೆ ವಾಸಿಗಳು

ವಶಪಡಿಸಿಕೊಂಡ ದ್ವಿಚಕ್ರವಾಹನಗಳ ವಿವರ:

·         ಟಿ.ಎನ್-೦೨-ಎಫ್-೨೭೪ ಹೀರೋಹೋಂಡಾ

·         ಎ.ಪಿ.-೦೩-ಕ್ಯೂ-೮೯೭೬ ಫೋರ್‍ ಎಸ್ ಚಾಂಪಿಯನ್ ಬಜಾಜ್

·         ಟಿ.ಎನ್.-೦೨-ಕ್ಯೂ-೪೨೨೬

·         ಹೀರೋಹೋಂಡಾ ಪ್ಲಾಟೀನಮ್

·         ಎ.ಪಿ.-೦೩-ಜೆ-೭೨೩ ಹೀರೋಹೋಂಡಾ ಸ್ಪ್ಲೆಂಡರ್‍

·         ಎ.ಪಿ-೦೩-ಜೆ-೫೦೩೩ ಸುಜುಕಿ ಸಮುರಾಯ್

·         ಕೆಎ-೧೪-ಇಜಿ-೦೯೭೮ ಹೀರೋಹೋಂಡಾ ಸಿ.ಡಿ ೧೦೦

·         ಎಪಿ-೦೩-ಎಎ-೦೩೮೨ ಬಜಾಜ್ ಡಿಸ್ಕವರಿ

·         ಎ.ಪಿ-೦೩-ಸಿ-೬೬೨೭ ಹೀರೋಹೋಂಡಾ ಸ್ಪ್ಲೆಂಡರ್‍

ಈ ಬಗ್ಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತ ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೧ ನೇ ಮೇ ೦೮

May 31, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೨

ನಂಗಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೦೫-೨೦೦೮ ರಮದು ೦೯೪೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ತಾತಿಕಲ್ಲು ಗ್ರಾಮದ ವಾಸಿಗಳಾಧ ವಿನೋದ್ ಕುಮಾರ್‍, ಸಂದೀಪ್ ಮತ್ತು ತರುಣ್ (೬) ಎಂಬುವರು ಎಲ್.ಎಮ್.ಎಲ್ ಫ್ರೀಡಂ ಸಂಖ್ಯೆ ಕೆಎ-೦೫-ಇ.ಎಂ-೮೧೧೧ ದ್ವಿಚಕ್ರವಾಹನದಲ್ಲಿ ಮುಳಬಾಗಿಲು ತಾಲೂಕು ಮದ್ಮಘಟ್ಟ ಗ್ರಾಮದ ರಾಚಪ್ಪರವರ ಜಮೀನಿನ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಲಾರಿ ಸಂಖ್ಯೆ ಡಬ್ಲ್ಯೂ.ಬಿ-೧೫-೮೭೯೬ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ತೀವ್ರವಾದ ಗಾಯಗಳಾಗಿದ್ದು ಆ ಪೈಕಿ ೬ ವರ್ಷದ ತರುಣ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೦೫-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ಆಂದ್ರಪ್ರದೇಶ ಪಾರಂಡ್ಲಹಳ್ಳಿ ಗ್ರಾಮದ ವಾಸಿ ಶ್ರೀರಾಮುಲು ಎಂಬುವರು ಪುಷ್ಪಮ್ಮ (೪೦) ಎಂಬುವರೊಡನೆ ಹೀರೋಹೋಂಡಾ ಸಂಖ್ಯೆ ಎಪಿ-೦೯-೪೩೫೨ ದ್ವಿಚಕ್ರವಾಹನದಲ್ಲಿ ಮುಳಬಾಗಿಲು ತಾಲೂಕು ಎನ್.ಹೆಚ್ ೪ ರಸ್ತೆಯ ಕೆ.ಬೈಪಲ್ಲಿ ಗ್ರಾಮದ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಶ್ರೀರಾಮುಲು ರವರು ತಮ್ಮ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿರುತ್ತಾರೆ.  ಇದರ ಪರಿಣಾಮ ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳಿತಿದ್ದ ಪುಷ್ಪಮ್ಮ ರವರಿಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

-ಸಾಧಾರಣ:  ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೦೫-೨೦೦೮ ರಂದು  ೧೮೩೦ ಗಂಟೆ ಸಮಯದಲ್ಲಿ ಅನ್ನಹಳ್ಳಿ ಗ್ರಾಮದ ವಾಸಿ ಅಶ್ವತ್ಥ ಎಂಬುವರು ಹೀರೋಹೋಂಡಾ ಸಂಖ್ಯೆ ಕೆಎ-೦೪-ಇಕ್ಯೂ-೮೦೭೦ ದ್ವಿಚಕ್ರವಾಹನದಲ್ಲಿ ಶಂಕರ್‍ ಎಂಬುವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಎನ್.ಹೆ‌ಚ್-೦೪ ರಸ್ತೆಯ ದೇವರಾಯಸಮುದ್ರ ಗ್ರಾಮದ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಅಶ್ವತ್ಥ ರವರು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿದ್ದು ವಾಹನ ಮುಗುಚಿ ಬಿದ್ದಿರುತ್ತದೆ.  ಇದರ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಶಂಕರ್‍ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ:  ‌ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ

-ಪ್ರಕರಣಗಳು: ೧೩

-ಸ್ಥಳ ದಂಡ ಮೊತ್ತ: ರೂ.೨೧೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಮೇ ೦೮

May 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ವರದಕ್ಷಣೆ ಸಾವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ ೬ ವರ್ಷಗಳ ಹಿಂದೆ ಮಾಲೂರು ತಾಲೂಕು ಗೋಣೂರುಕೊಪ್ಪ ಗ್ರಾಮದ ವಾಸಿ ಮುನಿಸ್ವಾಮಿ ಎಂಬುವರ ಮಗಳಾದ ನೀಲಾ (೨೮) ಎಂಬುವರನ್ನು ಮಾಲೂರು ತಾಲೂಕು ಅಣಿಕರಹಳ್ಳಿ ಗ್ರಾಮದ ವಾಸಿ ನಾಗರಾಜ ಎಂಬುವರಿಗೆ ಕೊಟ್ಟು ವಿವಾಹ ಮಾಡಿದ್ದರು. ನೀಲಾಗೆ ೩ ಜನ ಹೆಣ್ಣು ಮಕ್ಕಳಿದ್ದು ಗಂಡು ಮಕ್ಕಳಾಗದ ಕಾರಣ ಗಂಡ ನಾಗರಾಜ, ಮಾವ ಆಂಜಿನಪ್ಪ, ಅತ್ತೆ ತಿಮ್ಮಕ್ಕ ಎಂಬುವರು ಮಾನಸಿಕ ಹಿಂಸೆ ನೀಡಿ ವರದಕ್ಷಣೆ ತರುವಂತೆ ಪೀಡಿಸಿ ದಿನಾಂಕ ೨೯-೦೫-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ನೀಲಾ ರವರ ಕತ್ತು ಹಿಸುಕಿ ಕೊಲೆ ಮಾಡಿರುತ್ತಾರೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ / ವಂಚನೆ ಪ್ರಕರಣಗಳು: ೦೨

ನಂಗಲಿ ಪೊಲೀಸ್ ಠಾಣೆಯಲ್ಲಿ ಮೊಸ ಮತ್ತು ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತಾಲೂಕು ಬೈರಕೂರು ಗ್ರಾಮದಲ್ಲಿ ಏರ್‌ಟೆಲ್‌ ಟವರ್‌ನವರು ದಿನಾಂಕ ೧೭-೦೫-೨೦೦೮ ರಂದು ಸುಮಾರು ರೂ ೨ ಲಕ್ಷ ಬೆಲೆ ಬಾಳುವ ೪೮ ಬ್ಯಾಟರಿಗಳನ್ನು ಇಳಿಸಿದ್ದರು.  ದಿನಾಂಕ ೨೬-೦೫-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಆಟೋ ಸಂಖ್ಯೆ ಕೆಎ-೦೭-೭೫೬೨ ರಲ್ಲಿ ಬಂದ ೬ ಜನ ಅಪರಿಚಿತರು ತಾವು ಏರ್‌ಟೆಲ್‌ ಕಂಪನಿಯವರು ಎಂದು ಹೇಳಿ ಇಲ್ಲಿ ಇರುವ ಬ್ಯಾಟರಿಗಳನ್ನು ಮುಳಬಾಗಿಲುನಲ್ಲಿ ಅಳವಡಿಸಬೇಕೆಂದು ತಿಳಿಸಿ ಸುಳ್ಳು ಹೇಳಿ ಮೋಸ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಏರ್‌ಟೆಲ್‌ ಟವರ್‌ನ ಕಾವಲು ಸಿಬ್ಬಂದಿಯಾದ ಬಿ.ಎಸ್.ರಾಮಯ್ಯಶೆಟ್ಟಿ,ಬೈರಕೂರು ಗ್ರಾಮ ಎಂಬುವರು ದೂರನ್ನು ದಾಖಲಿಸಿರುತ್ತಾರೆ,

 ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮೊಸ ಮತ್ತು ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಳಬಾಗಿಲು ಘಟಕದ ನಗದು ಶಾಖೆಯಲ್ಲಿ ಕಿರಿಯ ಸಹಾಯಕನಾಗಿ ಕೆಲಸ ಮಾಡಿತ್ತಿದ್ದು ರಾಮಾನುಜಂ ಎಂಬವರು ನಿರ್ವಾಹಕರು ಟಿಕೆಟ್ ಗಳನ್ನು ಮಾರಾಟಮಾಡಿ ತಂದು ಜಮಾ ಮಾಢಿದ್ದ ಹಣ ರೂ.೧,೦೨,೪೮೮/- ಗಳನ್ನು ಸಂಸ್ಥೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ಹಣ ದುರುಪಯೋಗ ಮಾಡಿಕೊಂಡು ಸಂಸ್ಥೆಗೆ ಮೋಸ ಮಾಡಿರುತ್ತಾರೆ.  ಈ ಬಗ್ಗೆ ಕೋಲಾರ ಕೆ.ಎಸ್.ಆರ್‍.ಟಿ.ಸಿ. ಘಟಕದ ಭದ್ರತಾ ಮತ್ತು ತನಿಖಾಧಿಕಾರಿಯಾದ ಶ್ರೀನಿವಾಸ್ ಎಂಬುವರು ದೂರು ದಾಖಲಿಸಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ:  ‌ಇಲ್ಲ

ಹಲ್ಲೆ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೫-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಬನಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರಿಗೆ ಅದೇ ಗ್ರಾಮದ ವಾಸಿಗಳಾದ ನಾರಾಯಣಪ್ಪ ಮತ್ತು ಇತರೆ ನಾಲ್ಕು ಜನರು ದನಗಳ ಗಂಜಲ ಬಿಟ್ಟ ವಿಚಾರದಲ್ಲಿ ಜಗಳ ತೆಗೆದು ಅವಾಚ್ಚ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

 

 

 

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ

-ಪ್ರಕರಣಗಳು: ೦೫

-ಸ್ಥಳ ದಂಡ ಮೊತ್ತ: ರೂ.೬೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ಲಾಟರಿ ಮತ್ತು ಸಾರಾಯಿ ನಿಷೇದ ದಳದ ಕಾರ್ಯಾಚರಣೆ: ಮದ್ಯ ವಶ

May 30, 2008

ಲಾಟರಿ ಮತ್ತು ಸಾರಾಯಿ ನಿಷೇದ ದಳದ ಆರಕ್ಷಕ ನಿರೀಕ್ಷಕರಾದ ಶ್ರಿ ತಿಪ್ಪೇಸ್ವಾಮಿ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಮಾಲೂರು ತಾಲೂರು ಅಬ್ಬೇನಹಳ್ಳಿ ಗ್ರಾಮದ ಹಸೇನ್‌ಸಾಬ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ೧೦೮೦ ರೂ ಬೆಲೆ ಬಾಳುವ ೩೦ ರಾಜಾ ವಿಸ್ಕಿ ಬಾಟಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.


ಮಾಲೂರು ಪೊಲೀಸರ ಕಾರ್ಯಾಚರಣೆ: ಮದ್ಯ ವಶ.

May 30, 2008

ಮಾಲೂರು ಪೊಲೀಸ್ ಠಾಣೆಯ ಅರಕ್ಷಕ ಉಪ-ನಿರೀಕ್ಷಕರಾದ  ಹೀರೆಮಠ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಮಾಲೂರು ತಾಲೂರು ಅಬ್ಬೇನಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ೧೩೬೦ ರೂ ಬೆಲೆ ಬಾಳುವ ೩೮ ರಾಜಾ ವಿಸ್ಕಿ ಬಾಟಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಮೇ ೦೮

May 29, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:  ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ:  ‌ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೨೨

-ಸ್ಥಳ ದಂಡ ಮೊತ್ತ: ರೂ.೨೮೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಮೇ ೦೮

May 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೦೫-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ದಿನ್ನೂರು ಗ್ರಾಮದ ವಾಸಿ ಡಿ.ವೆಂಕಟೇಶ (೩೨) ಎಂಬುವರು ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಕ್ಯೂ-೪೩೧೩ ರಲ್ಲಿ ತನ್ನ ತಾಯಿ ಚೌಡಮ್ಮ (೪೨) ಎಂಬುವರನ್ನು ಕುಳ್ಳರಿಸಿಕೊಂಡು ಕೋಲಾರ-ಮಾಲೂರು ರಸ್ತೆಯ ಮಂಗಸಂದ್ರ ಗ್ರಾಮದ ಸಮೀಪ ಬರುತ್ತಿದ್ದರು.  ಆ ಸಮಯದಲ್ಲಿ ಡಿ,ವೆಂಕಟೇಶ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ತಿರುವಿನಲ್ಲಿ ವಾಹನವನ್ನು ತಿರುಗಿಸಿದಾಗ ಹಿಂಬದಿಯಲ್ಲಿ ಕುಳಿತಿದ್ದ ಚೌಡಮ್ಮ ಕೆಳಗೆ ಬಿದ್ದಿರುತ್ತಾರೆ. ಇದರ ಪರಿಣಾಮ ಚೌಡಮ್ಮರವರಿಗೆ ಗಾಯಗಳುಂಟಾಗಿದ್ದು ಕೋಲಾರದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾರೆ.

-ಸಾಧಾರಣ:  ೦೨

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೦೫-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಕೊಮ್ಮನಹಳ್ಳಿ ಗ್ರಾಮದ ವಾಸಿ ತಂಗವೇಲು (೩೫) ಎಂಬುವರು ಚಿನ್ನತಂಬಿ ಎಂಬುವರೊಡನೆ ಹೀರೋಹೋಂಡಾ ಪ್ಯಾಷನ್ ಸಂಖ್ಯೆ ಎಂ-೦೪-೨೧೫೭ ರಲ್ಲಿ ಮಾಲೂರು ತಾಲೂಕು ಓಬಟ್ಟಿ ಕ್ರಾಸ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಚಿನ್ನತಂಬಿರವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿದ್ದ ಜಲ್ಲಿ ಕಲ್ಲಿನ ರಾಶಿಗೆ ಡಿಕ್ಕಿ ಹೊಡೆದಿರುತ್ತಾರೆ.  ಇದರ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ತಂಗವೇಲು ರವರಿಗೆ ಗಾಯಗಳುಂಟಾಗಿರುತ್ತದೆ. 

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೦೫-೨೦೦೮ ರಂದು ೦೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ನಲ್ಲೂರು ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರು ತಮ್ಮ ಟ್ರಾಕ್ಟರ್‍ ಸಂಖ್ಯೆ ಕೆಎ-೦೭-ಟಿ-೭೩೮೫ ಅನ್ನು ಚಾಲನೆ ಮಾಡಿಕೊಂಡು ತಟ್ನಕುಂಟೆ ಕೆರೆಯಿಂದ ಮಣ್ಣು ತುಂಬಿಸಿಕೊಂಡು ಬರಲು ಎನ್.ಹೆಚ್ ೪ ರಸ್ತೆಯ ದೇವರಾಯಸಮುದ್ರ ಗೇಟ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಲಾರಿ ಕಂಟೈನರ್‍ ಸಂಖ್ಯೆ ಟಿಎನ್-೦೪-ಎಬಿ-೦೭೯೮ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಟ್ರಾಕ್ಟರ್‍ ಜಖಂಗೊಂಡಿದ್ದು ಟ್ರಾಕ್ಟರ್‍ ನಲ್ಲಿದ್ದ ವೆಂಕಟೇಶಪ್ಪ, ರಾಮು ಮತ್ತು ಅಂಬರೀಶ್ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಬೀಚಗೊಂಡಹಳ್ಳಿ ಗ್ರಾಮದಲ್ಲಿ ೧೬-೦೯-೨೦೦೪ ರಿಂದ ನವ ಸಾಕ್ಷರತಾ ಸ್ವ-ಸಹಾಯ ಸಂಘವನ್ನು ಸ್ಥಾಪನೆ ಮಾಡಿದ್ದರು.  ಇದರ ಪ್ರತಿನಿಧಿಯಾಗಿ ಮುನಿಲಕ್ಷ್ಮಮ್ಮ ಎಂಬುವರನ್ನು ಆಯ್ಕೆ ಮಾಡಲಾಗಿತ್ತು.  ಮುನಿಲಕ್ಷ್ಮಮ್ಮ ರವರು ಪ್ರತಿವಾರ ೨೦/ ರೂ ನಂತೆ ೧೧ ಜನ ಸದಸ್ಯರಿಂದ ಹಣವನ್ನು ಪಡೆದು ಬ್ಯಾಂಕಿನ ಖಾತೆಗೆ ಜಮೆ ಮಾಡಿರುವುದಿಲ್ಲ ಹಾಗೂ ೨೧-೧೦-೨೦೦೭ ರಂದು ಸಂಗದ ಸದಸ್ಯರ ಹೆಸರಿನಲ್ಲಿ ೩೦,೦೦೦/ ರೂಗಳನ್ನು ಪ್ರಗತಿ ಗ್ರಾಮೀಣ ಬ್ಯಾಂಕ್ ಹೆಚ್.ಕ್ರಾಸ್ ಶಾಖೆಯಲ್ಲಿ ಪಡೆದು ಸದಸ್ಯರಿಗೆ ಹಣವನ್ನು ನೀಡದೇ ಹಣವನ್ನು ದುರುಪಯೋಗ ಮಾಡಿಕೊಂಡು ಸಂಘದ ಸದಸ್ಯರಿಗೆ ವಂಚನೆ ಎಸಗಿರುತ್ತಾರೆ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ:   

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ಪುರ ಬಸ್ ನಿಲ್ದಾಣದ ಬಳಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೭-೦೫-೨೦೦೮ ರಮದು ೧೮೦೦ ಗಂಟೆ ಸಮಯದಲ್ಲಿ ಟಿ.ಆರ್‍.ನಳಿನಿ ಎಂಬುವರ ಮೇಲೆ ಜಗಳ ತೆಗೆದ ರಾಜೇಶ ಎಂಬುವನು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾನೆ.  ರಾಜೇಶ ರವರು ಟಿ.ಆರ್‍.ನಳಿನಿರವರ ಅಳಿಯನಾಗಿದ್ದು ಕೌಟುಂಬಿಕ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೨೨

-ಸ್ಥಳ ದಂಡ ಮೊತ್ತ: ರೂ.೨೮೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಮೇ ೦೮

May 27, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨6-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ 

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ:  ಇಲ್ಲ

-ಸಾಧಾರಣ:  ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ವೆಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಬೆಳ್ಳೂರು ಗ್ರಾಮದ ಮುನಿಯಪ್ಪ ರವರಿಗೆ ಸೇರಿದ ತೋಟದ ಬಳಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೫-೦೫-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಬೆಳ್ಳೂರು ಗ್ರಾಮದ ವಾಸಿ ನಾರಾಯಣಸ್ವಾಮಿ (೪೦) ಎಂಬುವರ ಮೆಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಚಿನ್ನಪ್ಪ, ಮುರಳಿ, ಕಾಂತಮ್ಮ, ಶ್ರೀನಿವಾಸ, ಸರಸಮ್ಮ, ಚಂದ್ರಮ್ಮ ಮತ್ತು ಪಿಲ್ಲಮ್ಮ ಎಂಬುವರು ದೊಣ್ಣೆ ಮತ್ತು ಕೈಕಾಲುಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.  ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ. 

ಹಲ್ಲೆ: ಇಲ್ಲ

ಇತರೆ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಅಕ್ರಮಪ್ರವೇಶ ಮತ್ತು ಸ್ವತ್ತುಹಾನಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಲಕ್ಷ್ಮಣಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೫-೦೫-೨೦೦೮ ರಂದು ರಾತ್ರಿ ಶ್ರೀನಿವಾಸಪುರ ತಾಲೂಕು ದಿಂಬಾಲ ಗ್ರಾಮದ ವಾಸಿ ಡಿ.ವಿ.ಬೈರಾರೆಡ್ಡಿ ಎಂಬುವರ ಲಕ್ಷ್ಮಣಪುರ ಗ್ರಾಮದ ತೋಟದೊಳಗೆ ನುಗ್ಗಿದ ಯಾರೋ ಅಪರಿಚಿತರು ತೋಟದ ಕೊಳವೆಬಾವಿಯ ಮೋಟಾರ್‍ , ಪಂಪ್, ಪೈಪುಗಳು ಮತ್ತು ಕೇಬಲ್ ಗಳನ್ನು ತುಂಡುಮಾಡಿ ನಾಶಪಡಿಸಿ ೨ ಲಕ್ಷ ರೂಗಳಷ್ಟು ನಷ್ಠ ಉಂಟುಮಾಡಿರುತ್ತಾರೆ.  ರಾಜಕೀಯ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಮರಸನಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೫-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಮರಸನಪಲ್ಲಿ ಗ್ರಾಮದ ವಾಸಿ ಹೆಚ್.ನಾಗೇಂದ್ರ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಬಾಜನ್ನ, ನಂಜಪ್ಪ, ವೇಣು, ನವೀನ, ಸರಸ್ವತಮ್ಮ, ರವಣಮ್ಮ ಮತ್ತು ಚಂದ್ರಶೇಖರ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಕೈಗಳಿಂದ, ಲಾಂಗ್ ನಿಂದ ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.  ಮರಸನಹಳ್ಳಿ ಗ್ರಾಮದ ವಾಸಿ ರಾಮಾಂಜನೇಯುಲು ಎಂಬುವರ ಮನೆಯಲ್ಲಿ ಮನೆವಿಭಾಗದ ವಿಚಾರವಾಗಿ ಜಗಳವಾಗುತ್ತಿದ್ದು ಬಿಡಿಸಲು ಹೋದ ಹೆಚ್.ನಾಗೇಂದ್ರರವರ ಮೇಲೆ ಆರೋಪಿಗಳು ಈ ಕೃತ್ಯ ಎಸಗಿರುತ್ತಾರೆ.  

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೨೮

-ಸ್ಥಳ ದಂಡ ಮೊತ್ತ: ರೂ. ೩೩೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಮೇ ೨೦೦೮

May 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨6-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ           ೨೬-೦೫-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಎಸ್.ಅಗ್ರಹಾರ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಮತ್ತು ಅವರ ಪತ್ನಿ ಲಕ್ಷ್ಮಮ್ಮ ಎಂಬುವರು ತಮ್ಮ ಮನೆಯಲ್ಲಿ ಇದ್ದರು. ಆ ಸಮಯದಲ್ಲಿ ಚುನಾವಣೆಯಲ್ಲಿ ಜೆ.ಡಿ.ಎಸ್ ಆಬ್ಯರ್ಥಿ ಜಯಗಳಿಸಿದ ಪರಿಣಾಮವಾಗಿ ಆದೇ ಗ್ರಾಮದ ವಾಸಿಗಳಾದ ಗೋವಿಂದಪ್ಪ ಮತ್ತು ಇತರೆ ೧೯ ಜನರು ಅಕ್ರಮವಾಗಿ ಗುಂಪು ಕಟ್ಟುಕೊಂಡು ರಸ್ತೆಗಳಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದರು.  ಈ ಪೈಕಿ ರಾಜಪ್ಪ ಮತ್ತು ಗೋವಿಂದಪ್ಪ ಎಂಬುವರು ನಾರಾಯಣಸ್ವಾಮಿ ರವರ ಮನೆಯ ಕಿಟಕಿಯ ಬಳಿ ಪಟಾಕಿಗಳನ್ನು ಸಿಡಿಸುತ್ತಿದ್ದರು. ಇದನ್ನು ನಾರಾಯಣಸ್ವಾಮಿ ಮತ್ತು ಇತರರು ಕೇಳಿದ್ದಕ್ಕೆ ಅಕ್ರಮ ಗುಂಪು ಕಟ್ಟಿಕೊಂಡು ಬಂದಿದ್ದ ಗೋವಿಂದಪ್ಪ ಮತ್ತು ಇತರರು ಪೆರುಮಾಳಪ್ಪ ಮತ್ತು ಇತರರನ್ನು ಮಾರಕಾಯುಧಗಳಿಂದ ಹಲ್ಲೆ ಮಾಡಿರುತ್ತಾರೆ. ಗಾಯಾಳುಗಳು ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು ಆ ಪೈಕಿ ಪೆರುಮಾಳಪ್ಪ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೫

-ಮಾರಣಾಂತಿಕ: ೦೩

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲೂಕು ಅಮರಾವತಿ ಗ್ರಾಮದ ವಾಸಿಯಾದ ರವಿ ಕುಮಾರ್‍ (೨೪) ಎಂಬುವರು ಕೋಲಾರ ತಾಲೂಕು ಚೋಳಘಟ್ಟ ಗ್ರಾಮದ ಕೆರೆಯ ದುರಸ್ಥಿ ಕೆಲಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಮಣ್ಣು ತುಂಬಿಕೊಂಡು ಬಂದ ಟ್ರಾಕ್ಟರ್‍ ಸಂಖ್ಯೆ ಕೆಎ-೦೭-ಟಿ-೬೭೦೦ ರ ಚಾಲಕ ತನ್ನ ಟ್ರಾಕ್ಟರ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೋಂಡು ಬಂದು ರವಿ ಕುಮಾರ್‍ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ತಲೆಗೆ ಮತ್ತು ಇತರೆ ಕಡೆ ರಕ್ತ ಗಾಯಗಳಾಗಿದ್ದು ಇಲಾಜಿಗಾಗಿ ಹೆಚ್‌-ಕ್ರಾಸ್ ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ವಾಸಿಗಳಾದ ಜೆ.ಕಾರ್ತಿಕೇಯನ್ ಮತ್ತು ಆತನ ಸ್ನೇಹಿತ ಕೆ.ಸಂತೋಷ್ ಎಂಬುವರ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೮-ಜೆ-೫೬೧೮ ರಲ್ಲಿ ಕೋಲಾರ ದಿಂದ ಬಂಗಾರುಪೇಟೆ ಕಡೆಗೆ ಹೋಗುತ್ತಿದ್ದರು. ಆಸಮಯದಲ್ಲಿ ಬಂಗಾರುಪೇಟೆ ಕಡೆಯಿಂದ ಬಂದ ಮಾರುತಿ ಕಾರು ಸಂಖ್ಯೆ ಕೆಎ-೦೭-ಎಂ-೧೮೮ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಜೆ.ಕಾರ್ತಿಕೇಯನ್ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮ ಕಾರಿನಲ್ಲಿದ್ದ ವೆಂಕಟೇಶ್ ಮತ್ತು ದ್ವಿಚಕ್ರವಾಹನದ ಹಿಂಬಂದಿ ಸವಾರನಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಪೈಕಿ ಕೋಲಾರ ನಗರದ ಖಾದ್ರಿಪುರದ ವಾಸಿ ವೆಂಕಟೇಶ್ ಎಂಬವರು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಲಕ್ಷ್ಮೀಸಾಗರ ಗ್ರಾಮದ ವಾಸಿಯಾದ ಶಂಕರಪ್ಪ ತನ್ನ ಪತ್ನಿಯೊಂದಿಗೆ ತನ್ನ ಹೀರೋ ಹೋಂಡಾ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಜೆ-೬೨೦೪ರಲ್ಲಿ ಕೋಲಾರ – ಶ್ರೀನಿವಾಸಪುರ ರಸ್ತೆಯ ವೀರಾಪುರ ಗೇಟ್ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಯಾವುದೋ ಒಂದು ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಂಕರಪ್ಪ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಹೊರಟು ಹೋಗಿರುತ್ತಾನೆ. ಇದರ ಪರಿಣಾಮವಾಗಿ ಶಂಕರಪ್ಪ ಕೆಳಗೆ ಬಿದ್ದು ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಆರ್‌.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ೨೬-೦೫-೦೮ ರಂದು ಬೆಳಗಿನ ಜಾವ ಮೃತಪಟ್ಟಿರುತ್ತಾನೆ.

 

-ಸಾಧಾರಣ:  ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಸೂಲೂರು ಗ್ರಾಮದ ವಾಸಿಯಾದ  ಮುಳಬಾಗಲಪ್ಪ ಎಂಬುವರ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕ್ಯೂ-೨೬೮೭ ರಲ್ಲಿ ರಾಷ್ಟ್ರೀಯ ಹೆದ್ದಾರಿ-೪ ರ ಚುಂಚದೇನಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು. ಆಸಮಯದಲ್ಲಿ ಎದುರಗಡೆಯಿಂದ ಬಂದ ಮಾರುತಿ ಸುಜುಕಿ ಕಾರು ಸಂಖ್ಯೆ ಕೆಎ-೦೫-ಝಡ್-೨೨೪೪ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಎರಡು ವಾಹನಗಳು ಜಖಂಗೊಂಡಿದ್ದು ದ್ವಿಚಕ್ರವಾಹನದ ಸವಾರನಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೫-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಟೇಕಲ್ ರಸ್ತೆಯ ನವರತ್ನ ನರ್ಸಿಂಗ್ ಹೋಂ ಹತ್ತಿರ ಸರೋಜಮ್ಮ ಮತ್ತು ಅವರ ಮಗಳಾದ ಮೀನಾ ಎಂಬುವರು ನಿಂತಿದ್ದರು. ಆಸಮಯದಲ್ಲಿ ಯಾವುದೋ ಒಂದು ಅಪರಿಚಿತ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೀನಾ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮ ಎಡಕಾಲಿಗೆ ರಕ್ತಗಾಯವಾಗಿರುತ್ತದೆ. ಚಿಕಿತ್ಸೆಗಾಗಿ ಎಸ್.ಎನ್.ಆರ್‍. ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಳ್ಳೂರು ಗ್ರಾಮದ ವಾಸಿಗಳಾದ ಮುನಿಯಪ್ಪ ಮತ್ತು ಇತರೆ ೪ ಜನರು ಅಕ್ರಮ ಗುಂಪು ಕಟ್ಟಿಕೊಂಡು ಗ್ರಾಮದ ಶ್ರೀ ಗಂಗಮ್ಮ ದೇವಾಲಯದ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಚಪ್ಪಡಿ ಕಲ್ಲುಗಳನ್ನು ನೆಟ್ಟುವ ಸಲುವಾಗಿ ನೆಲವನ್ನು ಅಗೆಯುತ್ತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ಚಿನ್ನಪ್ಪ ಎಂಬುವರು ಕೇಳಿದ್ದಕ್ಕೆ ದೊಣ್ಣೆ ಮತ್ತು ಕೈಗಳಿಂದ ಹೊಡೆಯುತ್ತಿದ್ದನ್ನು  ಬಿಡಿಸಲು ಬಂದ ಚಿನ್ನಪ್ಪ ರವರ ತಮ್ಮ ಶ್ರೀನಿವಾಸ ಬಂದಾಗ ಅವನಿಗೂ ಸಹ ಹೊಡೆದು ಗಾಯಪಡಿಸಿರುತ್ತಾರೆ.  

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:  ೦೫

-ಸ್ಥಳ ದಂಡ ಮೊತ್ತ: ೯೦೦

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 

 


ದಿನದ ಅಪರಾಧಗಳ ಪಕ್ಷಿನೋಟ ೨೫ನೇ ಮೇ ೦೮

May 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೪-೦೫-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಮುದ್ದೇಪಲ್ಲಿ ಗ್ರಾಮದ ವಾಸಿಯಾದ ಎಂ.ವಿ.ವಿಶ್ವನಾಥರೆಡ್ಡಿ ಎಂಬುವರು ತನ್ನ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಹೆಚ್-೮೬೫೮ ಅನ್ನು ಚಾಲನೆ ಮಾಡಿಕೊಂಡು ಕೋಟಬಲ್ಲಪಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದರು.  ಸಮಯದಲ್ಲಿ ಎದುರುಗಡೆಯಿಂದ ಬಂದ ಕೆ.ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೭೪೩ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರನಾದ ವಿಶ್ವನಾಥರೆಡ್ಡಿ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ವೇಮಗಲ್ ಹೋಬಳಿ ಕ್ಯಾಲನೂರು ಕ್ರಾಸ್ ವಿರ್ಶವನಗರದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೪-೦೫-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಪದ್ಮಮ್ಮ (೨೮)  ಎಂಬುವರ ಮನೆಯ ಬಳಿಗೆ ಬಂದ ಮೂರ್ತಿ ಎಂಬುವನು ಪದ್ಮಮ್ಮ ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಮಚ್ಚಿನಿಂದ ಹೊಡೆದು ಗಾಯಪಡಿಸಿರುತ್ತಾನೆ. 

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಹೊಗರಿ ಗ್ರಾಮದ ವಾಸಿ ಚಂದ್ರಪ್ಪ ಎಂಬುವರ ಮಗಳಾದ ಸುಧಾರಾಣಿ (೧೬) ಎಂಬ ಹುಡುಗಿ ಕಾಣೆಯಾಗಿರುತ್ತಾಳೆ.  ದಿನಾಂಕ ೧೯-೦೫-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ಟ್ಯೂಸನ್ ಗೆ ಹೋಗುವ ಸಲುವಾಗಿ ತನ್ನ ಮನೆಯಿಂದ ಹೊರಟ ಸುಧಾರಾಣಿ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾಳೆ.  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.