ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೭-೨೦೦೮ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೮ ರಮದು ೧೫೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತ್ಯಾಗನದೊಡ್ಡಿ ಗ್ರಾಮದ ವಾಸಿ ಕಾಂತಮ್ಮ ಎಂಬುವರು ತಮ್ಮ ತೋಟದ ಬಳಿ ಸೌದೆ ತೆಗೆದುಕೊಂಡು ಬರುತ್ತಿದ್ದರು. ಅ ಸಮಯದಲ್ಲಿ ಮಾಲೂರು ತಾಲೂಕು ಮಲಕನಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರನು ಏಕಾಏಕಿ ಕಾಂತಮ್ಮರವರ ಕತ್ತನ್ನು ಹಿಡಿದುಕೊಂಡು ತಳ್ಳಿ ತಲೆ ಕೂದಲು ಹಿಡಿದು ಎಳದಾಡಿ ತೋರುಬೆರಳುಗಳಿಂದ ಉಗುರುಗಳಿಂದ ಪರೀಚಿ ಕೆಳಕ್ಕೆ ತಳ್ಳಿ ಮಾನ ಭಂಗ ಮಾಡಲು ಪ್ರಯತ್ನಿಸಿ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿರುತ್ತಾರೆ.
ರಸ್ತೆ ಅಪಘಾತಗಳು: ೦೩
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೩
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಅಂದ್ರ ಪ್ರದೇಶದ ಪಲಮನೇರು ನಗರದ ವಾಸಿ ಭಾಸ್ಕರ್ ಎಂಬುವರು ತನ್ನ ಹೋಂಡಾ ಕಾರು ಸಂಖ್ಯೆ ಕೆಎ-೦೫-ಎಂಎ-೫೩೯೦ ರಲ್ಲಿ ಬೆಂಗಳೂರಿನಿಂದ ಚಿತ್ತೂರಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ೪ ರ ಮುಳಬಾಗಿಲು ಪಟ್ಟಣದ ಮದರಸ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ತಮ್ಮ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಹತೋಟಿ ತಪ್ಪಿ ಕಾರು ಪಲ್ಟಿ ಹೊಡೆದು ಜಖಂಗೊಂಡಿರುತ್ತದೆ.
ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಗ್ರಾಮದ ವಾಸಿ ರಫಿಕ್ ಎಂಬುವರು ತನ್ನ ಜೀಪ್ ಸಂಖ್ಯೆ ಎಪಿ-೦೩-ಯು-೬೧೯೭ ರಲ್ಲಿ ನರಸಿಂಹ ರೆಡ್ಡಿ ಮತ್ತು ಜ್ಯೋತಿ ಎಂಬುವರನ್ನು ಕುಳ್ಳರಿಸಿಕೊಂಡು ಶ್ರೀನಿವಾಸಪುರಕ್ಕೆ ಬರಲು ಬಿ.ಸಿ. ರಸ್ತೆಯ ಟೂಪಲ್ಲಿ ಕೆರೆಯ ತೀರುವಿನಲ್ಲಿ ಹೋಗುತ್ತಿದ್ದರು ಅ ಸಮಯದಲ್ಲಿ ಮದನಪಲ್ಲಿ ಕಡೆ ಹೋಗಲು ಬಂದ ಹಾಲಿನ ವಾಹನದ ಸಂಖ್ಯೆ. ಕೆಎ-೦೩-ಸಿ-೯೨೪೪ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜೀಪ್ ಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮವಾಗಿ ಚಾಲಕ ರಫೀಕ್, ನರಸಿಂಹರೆಡ್ಡಿ ಮತ್ತು ಜ್ಯೋತಿ ರವರಿಗೆ ರಕ್ತಗಾಯಗಳಾಗಿದ್ದು, ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತದೆ.
ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಕುಡಿಯನೂರು ಗ್ರಾಮದ ವಾಸಿ ನಾಗರಾಜ ಮತ್ತು ಇತರರು ಆಟೋ ರಿಕ್ಷಾ ಸಂಕ್ಯೆ ಕೆಎ-೦೮-೩೭೫೪ ರಲ್ಲಿ ಕುಡಿಯನೂರಿನಿಂದ ಮಾಲೂರುಗೆ ಬರಲು ಚನ್ನಕಲ್ಲು ಗೇಟ್ ಬಳಿ ಬರುತ್ತಿದ್ದರು. ಅ ಸಮಯದಲ್ಲಿ ಎದರುಕಡೆಯಿಂದ ಬಂದ ಟೆಂಪೋ ಸಂಖ್ಯೆ ೨೧೬೮ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಸಿ ಟೆಂಪೋವನ್ನು ನಿಲ್ಲಿಸದೆ ಹೊರಡು ಹೋಗಿರುತ್ತಾನೆ. ಇದರ ಪರಿಣಾಮವಾಗಿ ಆಟೋದಲ್ಲಿದ್ದ ಮುನಿರಾಜು ಮತ್ತು ಪೆರುಮಾಳ್ ಎಂಬುವರಿಗೆ ಗಾಯಗಳಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೆ.ಎಸ್.ಆರ್.ಟಿ.ಸಿ. ನಿರ್ವಾಹಕನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಮಾಲೂರು ಕೆ.ಎಸ್.ಆರ್.ಟಿ.ಸಿ. ಘಟಕದ ನಿರ್ವಾಹಕನಾದ ಎಸ್.ಜಿ.ಮಂಜುನಾಥ ಎಂಬುವರು ಹುಲದೇನಹಳ್ಳಿ ಗ್ರಾಮದಲ್ಲಿ ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಳ್ಳುತ್ತಿದ್ದನು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ರಮೇಶ, ಕೃಷ್ಣ ಮತ್ತು ಇತರರು ಏಕಾಎಕಿ ಬಂದು ಬಸ್ ಚಾಲಕನಾದ ಶ್ರೀನಿವಾಸರವರನ್ನು ಕೆಳಗೆ ಇಳಿಸಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಸಮವಸ್ತ್ರವನ್ನು ಹರಿದು ಹಾಕುತ್ತಿದ್ದರು ಅದನ್ನು ಬಿಡಿಸಲು ಹೋದ ನಿರ್ವಾಹಕ ಮಂಜುನಾಥ ಎಂಬುವನಿಗೂ ಸಹ ಹೊಡೆದು ಸಮವಸ್ತ್ರವನ್ನು ಹರಿದು ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿರುತ್ತಾರೆ.
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಎ.ಪಿ.ಎಸ್.ಆರ್.ಟಿ.ಸಿ. ನಿರ್ವಾಹಕನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೦೭-೨೦೦೮ ರಂದು ೦೨೧೫ ಗಂಟೆ ಸಮಯದಲ್ಲಿ ಎ.ಪಿ.ಎಸ್.ಆರ್.ಟಿ.ಸಿ. ಬಸ್ ಚಾಲಕನಾದ ಹಾಲಪ್ಪ ಶೆಟ್ಟಿ ಎಂಬುವರು ತನ್ನ ಬಸ್ಸನ್ನು ಚಾಲನೆ ಮಾಡಿಕೊಂಡು ಚಿತ್ತೂರಿನಿಂದ ಬೆಂಗಳೂರಿಗೆ ಹೋಗಲು ಕೋಲಾರ ಹೊರಹೊಲಯದ ಬೈಪಾಸ್ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಕ್ವಾಲಿಸ್ ಕಾರ್ ಸಂಖ್ಯೆ ಕೆಎ-೧೧-ಎಂ-೭೧೭೧ ರ ಚಾಲಕ ತನ್ನ ಕಾರನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದು ಇದನ್ನು ಕಂಡ ಬಸ್ ಚಾಲಕ ರಸ್ತೆಯ ಎಡಭಾಗಕ್ಕೆ ನಿಲ್ಲಿಸುವಷ್ಟರಲ್ಲಿ ಕಾರಿನ ಚಾಲಕನಾದ ನರಸಪ್ಪ ಎಂಬುವರು ತನ್ನ ಕಾರನ್ನು ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿ ಕಲ್ಲನ್ನು ಎತ್ತಿಕೊಂಡು ಬಸ್ಸಿಗೆ ಹೊಡೆಯಲು ಬರುತ್ತಿದ್ದನು. ಅದನ್ನು ಪ್ರಶ್ನಿಸಿದ ಬಸ್ ಚಾಲಕನಿಗೆ ಹಣೆಯ ಎಡಭಾಗಕ್ಕೆ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೦೬
-ಸ್ಥಳ ದಂಡ ಮೊತ್ತ: ರೂ.೭೦೦/
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice
Posted by kolarpolice
Posted by kolarpolice 



