ಸರ್ಜೆಂಟ್ ರವಿಶಂಕರ್ ಎಂಬುವರು ಕಾರ್-ನಿಕೋಬಾರ್ ಏರ್ ಪೋರ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದು ೨೦೦೪ ರಲ್ಲಿ ಅನಿರೀಕ್ಷಿತವಾಗಿ ಬಂದ ಸುನಾಮಿ ದುರ್ಘಟನೆಯಿಂದ ಇವರ ೧೨ ವರ್ಷದ ಮಗಳಾದ ಅಪೂರ್ವ (ಮೇಲ್ಕಂಡ ಭಾವಚಿತ್ರದಲ್ಲಿರುವ ಹುಡುಗಿ) ಎಂಬ ಹುಡುಗಿ ಕಾಣೆಯಾಗಿರುತ್ತಾಳೆ. ಹೀಗೆ ಕಾಣೆಯಾದ ಅಪೂರ್ವ ನಂತರ ೨೦೦೫ ರಲ್ಲಿ ಈಕೆಯ ತಂದೆ ಹಾಗೂ ತಾಯಿಗೆ ಚನ್ನೈ ರಿಲೀಫ್ ಕ್ಯಾಂಪಿನಲ್ಲಿ ಕಾಣಿಸಿಕೊಂಡಿರುತ್ತಾಳೆ. ಕೆಲ ದಿನಗಳ ಬಳಿಕ ಅಪೂರ್ವ ಪುನಃ ಅಲ್ಲಿಂದಲೂ ಸಹಾ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಮಾಹಿತಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿರುತ್ತದೆ. ತನ್ನ ಮಗಳನ್ನು ಮರೆಯಲಾಗದ ಪೋಷಕರು ಊಟ ನಿದ್ರೆಯನ್ನು ತೊರೆದು ಪರಿತಪಿಸುತ್ತಿದ್ದಾರೆ.
ಈ ರೀತಿಯಾಗಿ ಕಾಣೆಯಾದ ಅಪೂರ್ವ ಬಗ್ಗೆ ಸರಾಳ್ ಎಂಬ ಉರ್ದು ದಿನಪತ್ರಿಕೆಯಲ್ಲಿ ದಿನಾಂಕ ೧೮-೦೬-೨೦೦೯ ರಂದು ಮಾಹಿತಿ ಪ್ರಕಟಿಸಲಾಗಿದ್ದು ಈ ಬಗ್ಗೆ ಶ್ರೀ ಅಫ್ರೋಜ್ ಖಾನ್ ಎಂಬುವರು ೧೫ ದಿನಗಳ ಹಿಂದೆ ಕಾಣೆಯಾದ ಹುಡುಗಿ ಅಪೂರ್ವಳನ್ನು ಕೋಲಾರ ನಗರದ ಖುತುಬ್ ಘೋರಿ ದರ್ಗಾ ಬಳಿ ಸುಮಾರು ೫೦ ವರ್ಷ ವಯಸ್ಸಿನ ವ್ಯಕ್ತಿ ಹಾಗೂ ಇಬ್ಬರು ಮಹಿಳೆಯರೊಡನೆ ತಾನು ನೋಡಿದ್ದಾಗಿ ನುಡಿದಿರುತ್ತಾರೆ. ಆದುದರಿಂದ ಮೇಲ್ಕಂಡ ಭಾವಚಿತ್ರದಲ್ಲಿನ ಹುಡುಗಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಮಾಹಿತಿ ನಿಡಲು ಕೋರಲಾಗಿದೆ.
ದೂರವಾಣಿ ಸಂಖ್ಯೆಗಳು;
ಕಂಟ್ರೋಲ್ ರೂಂ: 08152-243066
ಕೋಲಾರ ಪುರ ಠಾಣೆ: 08152-222024
ಎಸ್.ಪಿ ಕೋಲಾರ: 08152-243060
ಎ.ಎಸ್.ಪಿ, ಕೋಲಾರ: 08152-243061
ಇ-ಮೇಲ್: ccklr@ksp.gov.in





July 18, 2009 at 10:42 pm |
sir, we seen regularly police matters, its very nice, kindly update kolarpolice.wordpress.com regularly within 6pm, its our request do not take serious. ok, thanks for your website informations. thanks once again.