ದಿನದ ಅಪರಾಧಗಳ ಪಕ್ಷಿನೋಟ ೩೧ನೇ ಜುಲ್ಯೆ ೨೦೦೯

July 30, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೩೧-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೭-೨೦೦೯ ರಂದು ೧೪೦೦ ರಂದು ೧೪೦೦ ಗಂಟೆ ಸಮಯದಲ್ಲಿ ಯಾರೋ ಕಳ್ಳರು ಕೋಲಾರ ತಾಲೂಕು ಕೋಡಿಕಣ್ಣೂರು ಗ್ರಾಮದ ವಾಸಿ ಎನ್.ವಿಜಯ ಸಾರಥಿ ಎಂಬುವರ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಎಲ್-೭೦೫೧ನ್ನು ಕೋಲಾರ ನಗರದ ಮುನೇಶ್ವರನಗರದ ಅವರ ಅಕ್ಕನ ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ರೂ. ೩೩,೬೦೦/- ಗಳಾಗಿರುತ್ತದೆ.  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ೦೧

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಕಲಿ ಕೈ ಗಡಿಯಾರ ತಯಾರು ಮಾಡಿ ಕಂಪನಿಗೆ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೯ಕ್ಕೆ ಹಿಂದೆ ಕೋಲಾರ ನಗರದ ರಹಮತ್‌ನಗರದ ಎಸ್‌.ಆರ್‌.ಎಸ್.ವಾಚ್ ಅಂಗಡಿಯಲ್ಲಿ ಟೈಟಾನ್ ಕಂಪನಿಯ ಕೈಗಡಿಯಾರಗಳನ್ನು ಅಸಲಿಗೆ ಹೋಲಿಕೆಯಾಗುವಂತೆ ನಕಲಿ ಕೈಗಡಿಯಾರಗಳನ್ನು ತಯಾರು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಿ ಮೋಸ ಮತ್ತು ಕಂಪನಿಗೆ ನಷ್ಟವನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಶ್ರೀ ಲವಕುಮಾರ್‍, ಇನ್‌ವೆಸ್ಟೀಗೇಷನ್ ಆಫೀಸರ್‍, ಮೆ. ಇ.ಐ.ಪಿ.ಆರ್‍(ಇಂಡಿಯಾ) ಲಿ. ಬೆಂಗಳೂರು ರವರು ದೂರನ್ನು ನೀಡಿದ್ದು ರೂ. ೧೫,೦೦೦/- ಬೆಲೆ ಬಾಳುವ ನಕಲಿ ಕೈಗಡಿಯಾರ ಮತ್ತು ಇತರೆ ವಸ್ತುಗಳನ್ನು ಅಮಾನತ್ತು ಪಡಿಸಿರುತ್ತಾರೆ. 

ಕೊಲೆಗೆ  ಪ್ರಯತ್ನ: ಇಲ್ಲ 

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಕಲಿ ಕ್ರಾಂಪ್ಟನ್ ಗ್ರೇವ್ ಪಾಲಿಸ್ಟರ್‍ ಬಲಾಸ್ಟ್‌  ಲಾಂಛನವನ್ನು  ಬಳಸಿಕೊಂಡು ಟೂಬ್‌ ಲೈಟ್‌ನ ಚೌಕ್‌ಗಳನ್ನು ನಕಲಿಯಾಗಿ ತಯಾರು        ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೯ಕ್ಕೆ ಹಿಂದೆ ಕೋಲಾರ ನಗರದ ಬಂಬೂ ಬಜಾರ್‍ ನಲ್ಲಿರುವ ಕಿಸಾನ್ ಎಲೆಕ್ಟ್ರಿಕಲ್ಸ್‌  ಅಂಗಡಿಯಲ್ಲಿ  ಕ್ರಾಂಪ್ಟನ್ ಗ್ರೇವ್ ಪಾಲಿಸ್ಟರ್‍ ಬಲಾಸ್ಟ್‌ ಅನ್ನು ಅಸಲಿಗೆ ಹೋಲಿಕೆಯಾಗುವಂತೆ ನಕಲಿ ಟೂಬ್‌ ಲೈಟ್‌ನ ಚೌಕ್‌ಗಳನ್ನು  ತಯಾರು ಮಾಡಿ   ಕಂಪನಿಗೆ ನಷ್ಟವನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಶ್ರೀ ಲವಕುಮಾರ್‍, ಇನ್‌ವೆಸ್ಟೀಗೇಷನ್ ಆಫೀಸರ್‍, ಮೆ. ಇ.ಐ.ಪಿ.ಆರ್‍(ಇಂಡಿಯಾ) ಲಿ. ಬೆಂಗಳೂರು ರವರು ದೂರನ್ನು ನೀಡಿದ್ದು ರೂ. ೩,೩೦೦/- ಬೆಲೆ ಬಾಳುವ ನಕಲಿ ಟೂಬ್‌ ಲೈಟ್‌ನ ಚೌಕ್‌ಗಳನ್ನು ಅಮಾನತ್ತು ಪಡಿಸಿರುತ್ತಾರೆ.

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೭-೨೦೦೯ ರಂದು ೦೮೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕೊತ್ತಮಂಗಲ ಗ್ರಾಮದ ವಾಸಿ ಎಂ.ರಾಮಚಂದ್ರಪ್ಪ ಎಂಬುವರ ಮಗಳಾದ ಕುಮಾರಿ ಕೆ.ಆರ್‌.ಪದ್ಮಶ್ರೀ @ ರಾಧಿಕ ಎಂಬುವರು ಮನೆಯಿಂದ ಮುಳಬಾಗಿಲು ಪಟ್ಟಣಕ್ಕೆ ಡಿ.ಇಡಿ ಕೋಚಿಂಗ್ ತರಬೇತಿಗೆ ಹೋಗಿ ಬರುವುದಾಗಿ ಹೇಳಿ ಬಂದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:   

-ಸ್ಥಳ ದಂಡ ಮೊತ್ತ:  ರೂ.  

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಜೂಜಾಟ ದಾಳಿ: ಇಬ್ಬರ ಬಂದನ, ರೂ. ೮೫೦/- ವಶ.

July 30, 2009

ದಿನಾಂಕ ೩೧-೦೭-೨೦೦೯ ರಂದು ೧೩೩೦ ಗಂಟೆ ಸಮಯದಲ್ಲಿ ಗಲ್‌ಪೇಟೆ ಪೊಲೀಸ್ ಠಾಣೆಯ ಆರಕ್ಷಕ ಉಪ-ನಿರೀಕ್ಷಕರಾದ ಶ್ರೀ ಎಂ.ಎಸ್.ಸರ್ದಾರ್‍ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಕೋಲಾರ ನಗರದ ಮಣಿಘಟ್ಟ ರಸ್ತೆಯ ಮೋರಿಯ ಕೆಳಗೆ ಹಣವನ್ನು ಪಣವಾಗಿಟ್ಟು ಅಂದರ್‍-ಬಾಹರ್‍ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ೨ ರನ್ನು ಬಂದಿಸಿ, ರೂ. ೮೫೦/- ಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ಬಂದಿತರ ವಿವರ:

  • ನಾಗರಾಜ ಬಿನ್ ನರಸಿಂಹಪ್ಪ, ೨೩ ವರ್ಷ, ಬಲಜಿಗರು, ಗಾಂಧೀನಗರ, ಕೋಲಾರ.
  • ಹರೀಶ ಬಿನ್ ಸುರೇಶ, ೨೨ ವರ್ಷ, ಬಲಜಿಗರು, ಗಾಂಧೀನಗರ, ಕೋಲಾರ.

ಈ ಬಗ್ಗೆ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.